ಬಿಗ್ ಬಾಸ್ ಮನೆ ಮಂದಿ ನಡುವೆ ವೈಮನಸ್ಸು: ಇದಕ್ಕೆ ಕಾರಣ ಅಮೂಲ್ಯ ಅಂದಿದ್ದು ಸರೀನಾ?

Written by Soma Shekar

Published on:

---Join Our Channel---

ಬಿಗ್ ಬಾಸ್ ಸೀಸನ್ ಒಂಬತ್ತರ ಕಳೆದ ವಾರದ ಆಟದಲ್ಲಿ ಹಾಲಿನ ಒಂದು ವಿಚಾರ ಎಲ್ಲರ ಗಮನವನ್ನು ಸೆಳೆದಿತ್ತು. ನಟಿ ಅಮೂಲ್ಯ ತನಗೆ ಗಟ್ಟಿ ಹಾಲು ಬೇಕೆಂದು ಕೇಳಿದ್ದ ವಿಷಯದ ಕುರಿತಾಗಿ ದೊಡ್ಡ ಚರ್ಚೆಯೊಂದು ನಡೆದಿತ್ತು. ಈಗ ವಾರಾಂತ್ಯದ ಎಪಿಸೋಡ್ ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಈ ವಿಚಾರವಾಗಿ ಅಮೂಲ್ಯ ಅವರನ್ನು ಮತ್ತು ಮನೆಯ ಅನ್ಯ ಸದಸ್ಯರನ್ನು ಪ್ರಶ್ನೆ ಮಾಡಿದ್ದಾರೆ. ಸುದೀಪ್ ಅವರು, ಅಮೂಲ್ಯ ಅವರೇ ಗಂಡಸರ ಬಾತ್ ರೂಂ ಎಂದು ಬರೆದವರು ನೀವೇ. ಈಗ ಗಟ್ಟಿ ಹಾಲು ಬೇಕು ಎಂದು ಹೇಳುತ್ತಿದ್ದೀರಿ. ನಿಮಗೆ ಈ ಮನೆಗೆ ಹೊಂದಿಕೊಳ್ಳುವುದು ಕಷ್ಟಾನಾ ಎಂದು ಕೇಳಿದ್ದಾರೆ.

ಉತ್ತರ ನೀಡಿದ ಅಮೂಲ್ಯ, ಹೊಂದಿಕೊಳ್ಳೋದು ಕಷ್ಟ ಆಗ್ತಿಲ್ಲ ಸರ್. ಮೊದಲೆಲ್ಲಾ ನಾನು ಹಾಲು ಕುಡಿದಿಲ್ಲ. ಸಿಗ್ತಿದಿದ್ದು ಒಂದು ಟೀ. ಅದು ನನಗೆ ಗಟ್ಟಿ ಹಾಲಲ್ಲಿ ಬೇಕಿತ್ತು. ಅದಕ್ಕೆ ಕೇಳಿದೆ ಎಂದು ಹೇಳಿದ್ದಾರೆ. ಆಗ ಪ್ರಶಾಂತ್ ಸಂಬರ್ಗಿ ಅಮೂಲ್ಯ ಅವರು ಅವರ ಹೇಳಿಕೆಯಿಂದ ಮನೆಯನ್ನು ಒಡೆಯುತ್ತಿದ್ದಾರೆ. ಯಾರೋ ಒಬ್ಬರಿಗೆ ಆಗುತ್ತಿಲ್ಲ ಅಂದ್ರೆ ಅವರನ್ನು ಆಚೆ ಇಡಿ ಎಂದು ಹೇಳಿದೆ. ನಾವೆಲ್ಲಾ ಒಟ್ಟಿಗೆ ಇರೋಣ, ಅದು ಜೀವನ, ಅದು ಬದುಕು ಅಂತ ಹೇಳಿದೆ. ಗಟ್ಟಿ ಹಾಲೇ ಬೇಕು ಅನ್ನೋದು ಸೂಪಿರಿಯಾರಿಟಿ ಕಾಂಪ್ಲೆಕ್ಸ್ ನ ಪರಮಾವಧಿ ಎಂದು ತಮ್ಮ ಅನಿಸಿಕೆಯನ್ನು ಬಹಳ ನೇರವಾದ ಮಾತುಗಳಿಂದ ಹಂಚಿಕೊಂಡಿದ್ದಾರೆ.

ರಾಕೇಶ್ ಅಡಿಗ ಮಾತನಾಡುತ್ತಾ, ನನ್ನ ಕ್ಯಾಪ್ಟನ್ಸಿ ಯಲ್ಲಿ ಬಂದ ಹಾಲಿನ ಪ್ರಮಾಣ ಕಡಿಮೆಯಿತ್ತು. ಕೆಲವರು ಒಟ್ಟಿಗೆ ಮಾಡೋಣ ಅಂದ್ರು, ಇನ್ನೂ ಕೆಲವರು ಬೇರೆ ರೀತಿ ಹೇಳಿದರು. ಕಾಮನ್ ಗ್ರೌಂಡ್ಸ್ ನಲ್ಲಿ ಎಲ್ಲರೂ ಒಪ್ಪಲಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ವೇಳೆ ದಿವ್ಯ ಉರುಡುಗ ಅಮೂಲ್ಯ ಒಬ್ಬರಿಂದ ಈ ಸಮಸ್ಯೆ ಆಗಿಲ್ಲ ಸರ್, ಎಲ್ಲರೂ ನಮಗೆ ಆ ಟೈಮ್ ಗೆ ಬೇಕು, ಈ ಟೈಮ್ ಗೆ ಬೇಕು ಅಂದಿದ್ದಕ್ಕೆ ಹೀಗಾಯ್ತು ಎಂದಿದ್ದಾರೆ. ಅನಂತರ ರೂಪೇಶ್ ರಾಜಣ್ಣ ಮಾತನಾಡುತ್ತಾ, ನಾವೆಲ್ಲಾ ಅಗ್ರಿ ಆಗಿದ್ವಿ ಸರ್, ಮನೆಯವರೆಲ್ಲಾ ಒಟ್ಟಿಗೆ ಟೀ ಮಾಡಿಕೊಂಡು ಕುಡಿಯೋಣ ಅಂತ. ಆದ್ರೆ ಅಮೂಲ್ಯ ಮಾತ್ರ ಬೇರೆ ಬೇಕು ಅಂದ್ರು ಎಂದು ಹೇಳಿದ್ದಾರೆ.

ಒಂಬತ್ತು ಜನರ ಜೊತೆಗೆ ಒಬ್ಬರು ಹೊಂದಿಕೊಳ್ಳೋದು ಸುಲಭ, ಒಂಬತ್ತು ಜನರು ಒಬ್ಬರಿಗೆ ಹೊಂದಿಕೊಳ್ಳುವುದು ಕಷ್ಟ, ಅಮೂಲ್ಯಾಗೆ ಕಷ್ಟ ಆಗ್ತಿರಬಹುದು ಎನ್ನುವ ಮಾತನ್ನು ಸಹಾ ರೂಪೇಶ್ ರಾಜಣ್ಣ ಹೇಳಿದ್ದಾರೆ. ಕೊನೆಗೆ ಅಮೂಲ್ಯ ತಮ್ಮ ಮಾತಿಗೆ ಸಮರ್ಥನೆ ನೀಡುವಂತೆ, ಮನೆಯಲ್ಲಿ ಯಾವ ಮಟ್ಟಿಗೆ ಒಟ್ಟಿಗೆ ಕೂತುಕೊಂಡು ಕುಡಿಯುತ್ತಾರೆ ಎಂದು ಅವರಿಗೆ ಗೊತ್ತಿದೆ. ಈ ಬಾರಿ ಕಡಿಮೆ ಜನ ಇದ್ರು. ಅದಕ್ಕೆ ಒಬ್ಬೊಬ್ಬರಿಗೆ ಬರುತ್ತೆ ಅಂತ ಬೇರೆ ಕೇಳಿದೆ ಎನ್ನುವ ಮಾತನ್ನು ಹೇಳಿದ್ದಾರೆ.‌

Leave a Comment