ಬಡವರ ಮಕ್ಕಳು ಬೆಳೀಬೇಕು ಅಂದಿದ್ದೆ ತಪ್ಪಾ? ಡಾಲಿ ಮೇಲೆ ನೆಟ್ಟಿಗರು ಬೇಸರಗೊಂಡಿದ್ದು ಏಕೆ??

Written by Soma Shekar

Published on:

---Join Our Channel---

ಕನ್ನಡ ಸಿನಿಮಾ ರಂಗದಲ್ಲಿ ನಾಯಕನಾಗಿ, ಖಳ ನಟನಾಗಿ, ನಿರ್ಮಾಪಕನಾಗಿ ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಪಡೆದಿರುವ ನಟ ಡಾಲಿ ಧನಂಜಯ್ ಅವರ ಸ್ಟಾರ್ ವರ್ಚಸ್ಸು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಸ್ಯಾಂಡಲ್ವುಡ್ ಮಾತ್ರವೇ ಅಲ್ಲದೇ ದಕ್ಷಿಣದ ಅನ್ಯ ಭಾಷೆಗಳಲ್ಲೂ ನಟಿಸಿ ಅಲ್ಲೂ ಸಹಾ ಜನಪ್ರಿಯತೆ ಪಡೆದಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ಹಂತ ಹಂತವಾಗಿ ಬೆಳೆದು ಇದೀಗ ಸ್ಟಾರ್ ನಟನಾಗಿ ಮಿಂಚುತ್ತಿರುವ ಡಾಲಿ ಅವರ ಮೇಲೆ ಇದೀಗ ನೆಟ್ಟಿಗರು ಅಸಮಾಧಾನಗೊಂಡಿದ್ದಾರೆ. ನಟನ ಮೇಲೆ ಕೆಲವರು ನೆಪೋಟಿಸಂ ಆ ರೋ ಪವನ್ನು ಮಾಡಿದ್ದಾರೆ ನೆಟ್ಟಿಗರು. ಡಾಲಿ ಧನಂಜಯ್ ಅವರನ್ನು ನೆಟ್ಟಿಗರು ಹೀಗೆ ಟೀಕೆ ಮಾಡಿದ್ದೇಕೆ?

ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಶ್ರಮ ವಹಿಸಿ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿ ಬೆಳೆದ ಧನಂಜಯ್ ಅವರು ಒಂದು ಬಹುಭಾಷಾ ನಟನಾಗಿ, ಕನ್ನಡ ಸಿನಿಮಾಗಳಲ್ಲಿ ನಟ ಮತ್ತು ನಿರ್ಮಾಪಕನಾಗಿ ಬೆಳೆಯುವ ಮೂಲಕ ಅನೇಕರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ. ಹೀಗೆ ಸ್ವಂತ ಪ್ರತಿಭೆಯಿಂದ ಬೆಳೆದು ಬಂದ ನಟ ಧನಂಜಯ್ ಅವರ ಮೇಲೆ ಈಗ ನೆಪೋಟಿಸಂ ಆ ರೋ ಪವೊಂದು ಕೇಳಿ ಬಂದಿದೆ. ನೆಟ್ಟಿಗರು ಇಂತಹುದೊಂದು ಟೀಕೆ ಮಾಡಲು ಕಾರಣವಾಗಿದ್ದು ಅವರು ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಟಗರು ಪಲ್ಯ

ಡಾಲಿ ಧನಂಜಯ್ ಅವರು ಟಗರು ಪಲ್ಯ ಎನ್ನುವ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಈ ಸಿನಿಮಾದ ಮುಹೂರ್ತ ಕೂಡಾ ಇತ್ತೀಚಿಗೆ ನಡೆದಿದೆ. ಈ ಸಿನಿಮಾ ಮೂಲಕ ಕನ್ನಡದ ಹೆಸರಾಂತ ನಟ ಪ್ರೇಮ್ ಅವರ ಮಗಳು ಅಮೃತಾ ನಾಯಕಿಯಾಗಿ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರೇಮ್ ಅವರ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಿರುವ ಡಾಲಿ ಧನಂಜಯ್ ಅವರ ಮೇಲೆ ನೆಟ್ಟಿಗರು ನೆಪೋಟಿಸಂ ನ ಆ ರೋ ಪವನ್ನು ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಡಾಲಿ ಅವರ ಒಂದು ಡೈಲಾಗ್ ಸಖತ್ ಸದ್ದು ಮಾಡಿದೆ.

ಡಾಲಿ ಅವರು ಸಿನಿಮಾದಲ್ಲಿ ಹೇಳಿದ್ದ, ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಎನ್ನುವ ಡೈಲಾಗ್ ಕೆಲವು ದಿನಗಳಿಂದಲೂ ಫೇಮಸ್ ಆಗಿದೆ. ಈಗ ಅದನ್ನೇ ಅಸ್ತ್ರವನ್ನಾಗಿ ಇಟ್ಟುಕೊಂಡ ನೆಟ್ಟಿಗರು, ಧನಂಜಯ್ ಅವರು ಬಡವರ ಮಕ್ಕಳನ್ನು ಬಿಟ್ಟು ನಟ ಪ್ರೇಮ್ ಅವರ ಮಗಳಿಗೆ ಅವಕಾಶವನ್ನು ನೀಡಿದ್ದಾರೆ ಎನ್ನುವ ಟೀಕೆಯೊಂದನ್ನು ಮಾಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಡಾಲಿ ಧನಂಜಯ್ ಅವರ ಪರವಾಗಿ ಮಾತನಾಡಿದರೆ, ಇನ್ನೂ ಕೆಲವರು ಅವರನ್ನು ಟೀಕೆ ಮಾಡಿದ್ದಾರೆ.

Leave a Comment