ದಕ್ಷಿಣ ಸಿನಿಮಾ ರಂಗದಲ್ಲಿ ಸ್ಟಾರ್ ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿ ತಮ್ಮ ಸಿನಿಮಾಗಳ ದೊಡ್ಡ ಯಶಸ್ಸನಿಂದಲೇ ಸದ್ದು ಮಾಡುತ್ತಾರೆ. ಪ್ರತಿ ಸಿನಿಮಾ ನಿರ್ದೇಶನವನ್ನು ಸಹಾ ಆಲೋಚಿಸಿ, ಒಂದು ಯೋಜನೆಯಂತೆ ಸಿದ್ಧಪಡಿಸುವ ಈ ನಿರ್ದೇಶಕನ ಸಿನಿಮಾಗಳು ಸೋಲಿನ ಹಾದಿ ಹಿಡಿಯುವುದಿಲ್ಲ ಎನ್ನುವುದು ನಿರ್ಮಾಪಕರ ನಂಬಿಕೆಯಾಗಿದೆ. ಬಹುಕೋಟಿ ಹಣವನ್ನು ಸಿನಿಮಾ ನಿರ್ಮಾಣಕ್ಕೆ ಹೂಡಿಕೆ ಮಾಡುವ ನಿರ್ಮಾಪಕರು ಸಹಾ ರಾಜಮೌಳಿ ಸಿನಿಮಾಕ್ಕೆ ಹೂಡಿಕೆ ಮಾಡಿದಾಗ ಬಹಳ ನಿಶ್ವಿಂತರಾಗಿರುತ್ತಾರೆ. ಏಕೆಂದರೆ ತಮ್ಮ ಬಂಡವಾಳದ ಜೊತೆಗೆ ಲಾಭ ಸಹಾ ಬರುತ್ತದೆ ಎನ್ನುವ ವಿಶ್ವಾಸ ಅವರಲ್ಲಿ ಇರುತ್ತದೆ. ನಿರ್ದೇಶಕ ರಾಜಮೌಳಿ ಅವರ ಸಿನಿಮಾಗಳಿಗೆ ದೊಡ್ಡ ಕ್ರೇಜ್ ಮತ್ತು ಅಭಿಮಾನಿ ಬಳಗವಿದೆ.
ತ್ರಿಬಲ್ ಆರ್ ನಂತರ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಾಯಕನಾಗಲಿರುವ ಸಿನಿಮಾ ನಿರ್ದೇಶನಕ್ಕೆ ರಾಜಮೌಳಿ ಸಜ್ಜಾಗಿದ್ದಾರೆ. ಈಗ ಈ ಸಿನಿಮಾ ಕುರಿತಾಗಿ ಹೊಸ ಮಾಹಿತಿಯೊಂದು ಹೊರ ಬಂದಿದ್ದು ಮಹೇಶ್ ಬಾಬು ಅಭಿಮಾನಿಗಳು, ಸಿನಿ ಪ್ರೇಮಿಗಳು ಮತ್ತು ರಾಜಮೌಳಿ ಸಿನಿಮಾಗಳ ಅಭಿಮಾನಿಗಳು ಸಹಾ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಅಭಿಮಾನಿಗಳು ಈಗ ಇಷ್ಡು ಥ್ರಿಲ್ ಆಗಲು ಕಾರಣವಾದರೂ ಏನು ? ಈ ಪ್ರಶ್ನೆ ಸಹಜವಾಗಿ ಮೂಡಿರಬಹುದು. ಅದಕ್ಕೆ ಉತ್ತರ ಇಲ್ಲಿದೆ. ಈ ವಿಷಯ ಈಗ ಸಾಕಷ್ಟು ರೋಚಕತೆಯನ್ನು ಮತ್ತು ಕುತೂಹಲವನ್ನು ಸಹಾ ಮೂಡಿಸಿದೆ.
ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ರಾಜಮೌಳಿ ಅನಂತರ ಬಾಹುಬಲಿ 2 ಮತ್ತು ತ್ರಿಬಲ್ ಆರ್ ಸಿನಿಮಾದ ಮೂಲಕ ಮತ್ತೊಮ್ಮೆ ಸಖತ್ ಸುದ್ದಿ ಮಾಡಿದರು. ತ್ರಿಬಲ್ ಆರ್ ಸಿನಿಮಾ ನಂತರ ರಾಜಮೌಳಿ ಮಹೇಶ್ ಬಾಬು ಗಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಸಹಜವಾಗಿಯೇ ಈ ಸಿನಿಮಾ ಎಂತಹ ಕಥೆಯಾಗಿರಲಿದೆ ಎನ್ನುವ ಆಸಕ್ತಿಯನ್ನು ಕೆರಳಿಸಿತ್ತು. ಈಗ ಈ ಹೊಸ ಸಿನಿಮಾವನ್ನು ಪ್ಯಾನ್ ಇಂಡಿಯಾ ಅಲ್ಲ, ಬದಲಿಗೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮಾಡುವ ಸಿದ್ಧತೆಗಳು ಆರಂಭವಾಗಿದೆ ಎನ್ನುವ ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡಿದೆ.
ಪ್ಯಾನ್ ಇಂಡಿಯಾ ಸಿನಿಮಾ ಗಳಲ್ಲಿ ರಾಜಮೌಳಿ ಅವರು ತೆಲುಗು ನಟರಿಗೆ ಮಾತ್ರವಲ್ಲದೇ ದಕ್ಷಿಣದ ಮತ್ತು ಬಾಲಿವುಡ್ ನಟರಿಗೂ ಅವಕಾಶ ನೀಡಲು ಆರಂಭಿಸಿದ್ದಾರೆ. ಈಗ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ರಾಜಮೌಳಿ ತಮ್ಮ ಹೊಸ ಸಿನಿಮಾಕ್ಕೆ ಕಲಾವಿದರನ್ನು ಆಯ್ಕೆ ಮಾಡಲು ಅಮೆರಿಕಾದ ಟ್ಯಾಲೆಂಟ್ ಏಜನ್ಸಿಯಾಗಿರುವ ಕ್ರಿಯೇಟಿವ್ ಆರ್ಟಿಸ್ಟ್ ಏಜೆನ್ಸಿ ಜೊತೆಗೆ ಟೈ ಅಪ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಪ್ಯಾರಿಸ್ ನಲ್ಲಿ ಒಂದು ವಿಎಫ್ಎಕ್ಸ್ ಕಂಪನಿ ಜೊತೆ ಸಹಾ ಅವರು ಕೈ ಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿವುಡ್ ನ ಇಂಡಿಯಾನಾ ಜೋನ್ಸ್ ರೀತಿಯಲ್ಲಿ ಸಿನಿಮಾ ಮಾಡುತ್ತಾರೆ ಎನ್ನಲಾಗಿದೆ.