ನೋವಿನಲ್ಲೇ ಕೆಲಸಕ್ಕೆ ಮರಳಿದ ಮಹೇಶ್ ಬಾಬು ಶೇರ್ ಮಾಡಿದ ಪೋಸ್ಟ್ ಕಂಡು ಥ್ರಿಲ್ಲಾದ ಫ್ಯಾನ್ಸ್

Written by Soma Shekar

Published on:

---Join Our Channel---

ಟಾಲಿವುಡ್ ನ ಪ್ರಿನ್ಸ್ ಖ್ಯಾತಿಯ ನಟ ಮಹೇಶ್ ಬಾಬು ಅವರಿಗೆ ಈ ವರ್ಷ ಅಷ್ಟೊಂದು ಶುಭ ಅಲ್ಲ ಎನ್ನುವಂತಹ ಘಟನೆಗಳು ಅವರ ವೈಯಕ್ತಿಕ ಜೀವನದಲ್ಲಿ ನಡೆದಿದೆ. ಈ ವರ್ಷ ಅವರಿಗೆ ಸಾಕಷ್ಟು ನೋವನ್ನು ಉಳಿಸಿ ಹೋಗುತ್ತಿದೆ. ಒಂದೇ ವರ್ಷದಲ್ಲಿ ತಮ್ಮ ಕುಟಂಬದಲ್ಲಿ ಮೂವರನ್ನು ಕಳೆದುಕೊಂಡ ನೋ ವು ಮತ್ತು ಸಂ ಕಟ ಅವರನ್ನು ಕಾಡುತ್ತಿದೆ. ಹೌದು, ನಟ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಅವರು ಸೆಪ್ಟೆಂಬರ್ 28 ರಂದು ನಿಧನ ಹೊಂದಿದರು. ತಾಯಿಯ ನಿಧನದ ದುಃಖದಲ್ಲಿದ್ದರು ನಟ ಮಹೇಶ್ ಬಾಬು. ಇನ್ನು ಇದೇ ವರ್ಷ ಅವರ ಹಿರಿಯ ಸಹೋದರ ಕೂಡಾ ಆರೋಗ್ಯ ಸಮಸ್ಯೆಯಿಂದ ಇಹಲೋಕವನ್ನು ತ್ಯಜಿಸಿದ್ದರು.

ಹೀಗೆ ಸಹೋದರನನ್ನು ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಮಹೇಶ್ ಬಾಬು ಅವರು ಆ ನೋವಿನಿಂದ ಹೊರಗೆ ಬರುವ ಮೊದಲೇ ಇತ್ತೀಚಿಗಷ್ಟೇ ಅವರ ತಂದೆ ತೆಲುಗು ಸಿನಿಮಾ ರಂಗದ ಹಿರಿಯ ನಟ ಕೃಷ್ಣ ಅವರ ನಿಧನರಾಗಿದ್ದಾರೆ. ಆದರೆ ಎಲ್ಲಾ ನೋವಿನ ನಡುವೆಯೇ ಅವರು ಕೆಲಸಕ್ಕೆ ಹಿಂತಿರುಗಲೇ ಬೇಕಾಗಿದೆ. ಏಕೆಂದರೆ ನಟನನ್ನು ನಂಬಿ ಸಾಕಷ್ಟು ಹಣವನ್ನು ಹೂಡಿದ್ದಾರೆ ಜಾಹೀರಾತು ಕಂಪನಿಗಳು ಮತ್ತು ಸಿನಿಮಾ ನಿರ್ಮಾಪಕರು. ಈಗ ತಂದೆಯ ಸಾವಿನ ನೋವಿನ ಬೆನ್ನಲ್ಲೇ ಮಹೇಶ್ ಬಾಬು ಅವರು ಜಾಹೀರಾತೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಮಹೇಶ್ ಬಾಬು ಅವರ ಸರ್ಕಾರು ವಾರಿ ಪಾಟ ಸಿನಿಮಾ ಈ ವರ್ಷ ತೆರೆಗೆ ಬಂದಿತ್ತು. ಇದಾದ ನಂತರ ನಟ ಮಹೇಶ್ ಬಾಬು ರಾಜಮೌಳಿ ನಿರ್ದೇಶನದಲ್ಲಿ ಹೊಸ ಸಿನಿಮಾ ಮಾಡುವ ವಿಷಯ ದೊಡ್ಡ ಸದ್ದು ಮಾಡಿದೆ. ಆ ಸಿನಿಮಾ ಆರಂಭಕ್ಕೂ ಮೊದಲೇ ಇದೀಗ ನಟ ಮಹೇಶ್ ಬಾಬು ಅವರು ತ್ರಿವಿಕ್ರಮ್ ಶ್ರೀನಿವಾಸ್ ಜೊತೆಯಲ್ಲಿ ಹೊಸ ಸಿನಿಮಾ ಮಾಡುತ್ತಿದ್ದ,‌ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಮತ್ತು ಶ್ರೀಲೀಲಾ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾ ಹೆಗ್ಡೆ ಅವರ ಕಾಲಿಗೆ ಗಾಯವಾದ ಕಾರಣ ಸಿನಿಮಾ ಚಿತ್ರೀಕರಣವು ತಡವಾಗಿತ್ತು. ಆದರೆ ಈಗ ಸಿನಿಮಾ ಚಿತ್ರೀಕರಣ ಆರಂಭವಾಗಿದೆ.

ನಟ ಮಹೇಶ್ ಬಾಬು ಅವರು ತಾನು ತನ್ನ ಕೆಲಸಗಳಿಗೆ ಹಿಂತಿರುಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸುವ ಸಲುವಾಗಿ ಹೊಸ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಹೊಸ ಫೋಟೋದಲ್ಲಿ ನಟನ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದು ಮಹೇಶ್ ಬಾಬು ಅವರು ನಟಿಸುತ್ತಿರುವ ಹೊಸ ಜಾಹೀರಾತಿನಲ್ಲಿನ ಲುಕ್ ಆಗಿದೆ. ಇನ್ನು ಅತಿ ಶೀಘ್ರದಲ್ಲೇ ತ್ರಿವಿಕ್ರಮ್ ಅವರ ನಿರ್ದೇಶನದ ಹೊಸ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. ಇದೇ ವೇಳೆ ರಾಜಮೌಳಿ ಮಹೇಶ್ ಬಾಬು ಅವರಿಗಾಗಿ ಮಾಡಲಿರುವ ಹೊಸ ಸಿನಿಮಾವನ್ನು ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲು ಸಿದ್ಧತೆಗಳನ್ನು ನಡೆಸಿದ್ದಾರೆ.

Leave a Comment