ನಿಂತ ಸ್ಥಳದಲ್ಲೇ ಜನರ, ಪೋಲಿಸರ ಕ್ಷಮೆ ಯಾಚಿಸಿದ ನಟ ದಳಪತಿ ವಿಜಯ್! ಈ ಕ್ಷಮೆ ಏಕೆ??

Written by Soma Shekar

Published on:

---Join Our Channel---

ನಟರು ಯಾವುದೇ ಭಾಷೆಯವರೇ ಆಗಲೀ ಸ್ಟಾರ್ ನಟರು ಎನ್ನುವ ಸ್ಥಾನವನ್ನು ಪಡೆದ ಮೇಲೆ ಸಹಜವಾಗಿಯೇ ಅವರ ಅಭಿಮಾನಿಗಳ ಸಂಖ್ಯೆಯೂ ಸಹಾ ದೊಡ್ಡದಾಗಿರುತ್ತದೆ. ಆದ್ದರಿಂದಲೇ ಈ ಸ್ಟಾರ್ ನಟರು ಬರುವ ಕಡೆ ಹಾಗೂ ಹೋಗುವ ಕಡೆ ದೊಡ್ಡ ಅಭಿಮಾನಿಗಳ ದಂಡು ಅವರನ್ನು ನೋಡುವ ಸಲುವಾಗಿ ತುಂಬಿಕೊಳ್ಳುವುದು ಸಹಾ ನಾವು ನೋಡಿದ್ದೇವೆ. ಅಭಿಮಾನಿಗಳಿಗೆ ಸ್ಟಾರ್ ನಟರನ್ನು ನೋಡುವುದು ಒಂದು ದೊಡ್ಡ ಕ್ರೇಜ್ ಇರುವುದು ಸಹಜ. ಆದ್ದರಿಂದಲೇ ನಟರ ಸಾರ್ವಜನಿಕವಾಗಿ ಕಂಡರೆ ಅಲ್ಲಿ ಜನ ಜಂಗುಳಿ ದೊಡ್ಡ ಮಟ್ಟದಲ್ಲೇ ಇರುತ್ತದೆ.

ಸ್ಟಾರ್ ನಟರು ಸಾರ್ವಜನಿಕ ಸ್ಥಳಗಳಿಗೆ ಬರುತ್ತಾರೆ ಎಂದರೆ ಅಲ್ಲಿ ಮೊದಲೇ ಸುರಕ್ಷತೆಯ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ, ಜನ ಜಂಗುಳಿಯನ್ನು ತಡೆಯಲು ಪೋಲಿಸ್ ಅಥವಾ ರಕ್ಷಣಾ ಸಿಬ್ಬಂದಿಯು ಕಾರ್ಯಪ್ರವೃತ್ತರಾಗುತ್ತಾರೆ. ದೊಡ್ಡ ಸ್ಟಾರ್ ನಟರು ಅಂದ ಮೇಲೆ ನೋಡಲು ಬರುವ ಜನರ ಸಂಖ್ಯೆ ಕೂಡಾ ದೊಡ್ಡದಾದ್ದರಿಂದ ಜನ ಜಂಗುಳಿಯನ್ನು ತಡೆಯುವುದು ಪೋಲಿಸರಿಗೆ ದೊಡ್ಡ ಸವಾಲು ಆಗಿರುತ್ತದೆ‌. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪೋಲಿಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ.

ತಮಿಳು ನಾಡಿನಲ್ಲಿ ಸ್ಟಾರ್ ನಟನಾಗಿ ದೊಡ್ಡ ಹೆಸರನ್ನು ಪಡೆದುಕೊಂಡಿರುವ ನಟ ದಳಪತಿ ವಿಜಯ್. ಈ ನಟನ ಸ್ಟಾರ್ ಡಂ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ‌. ಇಂತಹ ದೊಡ್ಡ ಜನಪ್ರಿಯತೆ ಪಡೆದಿರುವ ನಟ ವಿಜಯ್ ಅವರು ನಗರದ ಸ್ಥಳೀಯ ಚುನಾವಣೆಯೊಂದಕ್ಕೆ ಮತ ಚಲಾಯಿಸಲು ಬಂದಿದ್ದರು. ಈ ವೇಳೆ ಸಹಜವಾಗಿಯೇ ಅಭಿಮಾನಿಗಳು ಹಾಗೂ ಇನ್ನಿತರೆ ಮಂದಿ ಸೇರಿದ್ದರಿಂದ ಜನ ಜಂಗುಳಿ ಹೆಚ್ಚಾಗಿದೆ.

ಜನ ಸಮೂಹದಲ್ಲಿ ಸಿಲುಕಿಕೊಂಡಿದ್ದ ನಟನನ್ನು ಮತ ಹಾಕಿಸಲು ಮತ ಗಟ್ಟೆಗೆ ಕರೆದೊಯ್ಯಲು ಪೋಲಿಸರು ಈ ವೇಳೆ ಹರ ಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೆಲ್ಲವನ್ನು ನೋಡಿದ ನಟ ವಿಜಯ್ ಅವರು ತನ್ನಿಂದ ಜನ ಸಾಮಾನ್ಯರಿಗೆ ತೊಂದರೆ ಉಂಟಾಗಿದ್ದಕ್ಕೆ ಸ್ಥಳದಲ್ಲೇ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ ತಾನು ಪೋಲಿಸರಿಗೆ ಮೊದಲೇ ಹೇಳಿ ಬಂದಿದ್ದರೆ ಇಷ್ಟೊಂದು ಸಮಸ್ಯೆ ಆಗುತ್ತಿರಲಿಲ್ಲ ಎಂದು ಪೋಲಿಸರಿಗೂ ಸಹಾ ಗೊಂದಲ ಆಗುತ್ತಿರಲಿಲ್ಲ ಎಂದು ಅವರ ಬಳಿಯೂ ಕ್ಷಮೆ ಕೇಳಿದ್ದಾರೆ.

Leave a Comment