“ನಾವೇ ಗೆದ್ದೆವು” ವರಾಹ ರೂಪಂ ಹಾಡನ್ನು ತೆಗೆದಿದ್ದಕ್ಕೆ ಸಂಭ್ರಮ ಹಂಚಿಕೊಂಡ ತೈಕ್ಕುಡಂ ಬ್ರಿಡ್ಜ್

Written by Soma Shekar

Published on:

---Join Our Channel---

ಕನ್ನಡ ಮೂಲದ ಕಾಂತಾರ ಸಿನಿಮಾ ದೇಶ, ವಿದೇಶಗಳಲ್ಲಿ ಮಾಡುತ್ತಿರುವ ಸದ್ದು ಎಂತದ್ದು ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ಕಾಂತಾರ ಸಿನಿಮಾ ಭಾಷೆಯ ಗಡಿಗಳನ್ನು ದಾಟಿ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದೆ. ಥಿಯೇಟರ್ ಗಳ ನಂತರ ಇದೀಗ ಕಾಂತಾರ ಓಟಿಟಿಯಲ್ಲಿ ಸಹಾ ಬಿಡುಗಡೆ ಆಗಿದೆ. ಆದರೆ ಈಗ ಕಾಂತಾರ ಸಿನಿಮಾ ಟ್ವಿಟರ್ ನಲ್ಲಿ ಬೇರೆಯದೇ ಒಂದು ವಿಚಾರಕ್ಕೆ ಟ್ರೆಂಡ್ ಆಗುತ್ತಾ ಸಾಗಿದೆ. ಹೌದು, ಓಟಿಟಿಯಲ್ಲಿ ಕಾಂತಾರ ಸಿನಿಮಾದಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದ ವರಾಹರೂಪಂ ಹಾಡು ಸಂಪೂರ್ಣವಾಗಿ ಬದಕಾಗಿ ಹೋಗಿದ್ದು, ಹೊಸ ಟ್ಯೂನ್ ನಲ್ಲಿ ಬಂದಿರುವ ಹಾಡು ನೋಡಿ ಅನೇಕರು ಅಸಮಾಧಾನ ಗೊಂಡಿದ್ದು, ವರಾಹರೂಪಂ ಹಾಡನ್ನು ಮರಳಿ ತರುವಂತೆ ಮಾಡಿರುವ ಆಗ್ರಹ ಟ್ರೆಂಡ್ ಆಗಿದೆ.

ವರಾಹರೂಪಂ ಹಾಡು ತೈಕ್ಕುಡಂ ಬ್ರಿಡ್ಜ್ ನ ನವರಸಂ ಹಾಡಿನ ಕಾಪಿ ಎಂದು ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲನ್ನು ಏರಿದ್ದರಿಂದ, ಕೇರಳ ಹೈಕೋರ್ಟ್ ಈ ಸಿನಿಮಾದಲ್ಲಿನ ವರಾಹರೂಪಂ ಹಾಡಿನ ಬಳಕೆಯ ಮೇಲೆ ತಡೆಯಾಜ್ಞೆ ಹೇರಿದ್ದು, ಈಗ ಓಟಿಟಿಯಲ್ಲಿ ವರಾಹರೂಪಂ ಹಾಡನ್ನು ಬದಲಿಸಿ, ಬೇರೆ ಟ್ಯೂನ್ ನಲ್ಲಿ ಹಾಡನ್ನು ರೆಕಾಡ್ ಮಾಡಿ ತೋರಿಸಲಾಗಿದೆ. ಇದನ್ನು ನೋಡಿದ ನೆಟ್ಟಿಗರು, ಸಿನಿಮಾದ ಆತ್ಮದ ಹಾಗಿದ್ದ ಹಾಡೇ ಇಲ್ಲ ಎಂದ ಮೇಲೆ ಸಿನಿಮಾ ನೋಡಲು ಕಷ್ಟವಾಗುತ್ತಿದೆ. ದಯವಿಟ್ಟು ವರಾಹರೂಪಂ ನ‌ ಮೊದಲ ಟ್ಯೂನ್ ಹಾಡನ್ನು ವಾಪಸ್ಸು ತನ್ನಿ ಎಂದು ಅನೇಕರು ಟ್ವೀಟ್ ಮಾಡಿದ್ದಾರೆ.

ಕೆಲವರು ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಮೇಲೆ ಕಿಡಿ ಕಾರಿದ್ದಾರೆ. ಸ್ವಾರ್ಥ, ದುರಾಸೆ ಹಾಗೂ ಹಣದ ಆಸೆಯಿಂದ ಇಂತಹುದೊಂದು ಕೆಲಸ ಮಾಡಿ ವರಾಹರೂಪಂ ಹಾಡನ್ನು ಇಲ್ಲದ ಹಾಗೆ ಮಾಡಿದ ನಿಮಗೆ ಧನ್ಯವಾದಗಳು ಎಂದು ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಮೇಲೆ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇನ್ನೂ ಕೆಲವರು ಹಾಡಿನ ಕುರಿತಾದ ವಿ ವಾ ದವನ್ನು ಪರಿಹರಿಸಕೊಂಡ ಮೇಲೆಯೇ ಸಿನಿಮಾವನ್ನು ಓಟಿಟಿ ಗೆ ಕೊಡಬೇಕಿತ್ತು. ಬಹಳ ಆಸೆಯಿಂದ ಸಿನಿಮಾ ನೋಡಲು ಬಯಸಿದ್ದ ನಮಗೆ ಬಹಳಷ್ಟು ನಿರಾಸೆ ಎದುರಾಗಿದೆ ಎಂದು ಸಹಾ ಟ್ವೀಟ್ ಗಳನ್ನು ಮಾಡಿದ್ದಾರೆ.

https://www.instagram.com/p/ClVEuCvyhjk/?igshid=YmMyMTA2M2Y=

ಇನ್ನು ಓಟಿಟಿಯಲ್ಲಿ ವರಾಹರೂಪಂ ಹಾಡನ್ನು ತೆಗೆದು ಹಾಕಿರುವುದಕ್ಕೆ ತೈಕ್ಕುಡಂ ಬ್ರಿಡ್ಜ್ ತಂಡವು ಖುಷಿ ಪಟ್ಟಿದ್ದು, ತಮ್ಮ‌ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಸಂತೋಷವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಒಂದು ಪೋಸ್ಟ್ ನಲ್ಲಿ, ಅಮೆಜಾನ್ ಪ್ರೈಮ್ ಕಾಂತಾರ ಚಲನಚಿತ್ರದಿಂದ ನಮ್ಮ ‘ನವರಸಂ’ ಹಾಡಿನ ಕೃತಿಚೌರ್ಯದ ಆವೃತ್ತಿಯನ್ನು ತೆಗೆದುಹಾಕಿದೆ. ನ್ಯಾಯ ಮೇಲುಗೈ ಸಾಧಿಸಿದೆ! ನಮ್ಮ ವಕೀಲರಾದ ಸತೀಶ್ ಮೂರ್ತಿ ಮತ್ತು ನಮ್ಮ ಮಾರ್ಗದರ್ಶಕ ಮಾತೃಭೂಮಿ ಅವರ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು. ಹಕ್ಕುಗಳಿಗಾಗಿ ಹೋರಾಡಲು ತಮ್ಮ ಸಂಪೂರ್ಣ ಹೃದಯದ ಬೆಂಬಲವನ್ನು ನೀಡಿದ ನಮ್ಮ ಸಂಗೀತಗಾರ ಸಹೋದರರು, ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಧನ್ಯವಾದಗಳು.” ಎಂದು ಬರೆದುಕೊಂಡಿದ್ದಾರೆ.

Leave a Comment