ನಾನು ಆ ನೆಲದವನೇ.. ಕಾಂತಾರ ನೋಡಿ ಕಣ್ಣೀರು ಹಾಕಿದ ಬಾಲಿವುಡ್ ನಟ ಸುನೀಲ್ ಶೆಟ್ಟಿ

Written by Soma Shekar

Published on:

---Join Our Channel---

ಕನ್ನಡದ ಕಾಂತಾರ ಐವತ್ತು ದಿನಗಳನ್ನು ಪೂರೈಸಿದರೂ ಇನ್ನೂ ಸಿನಿಮಾದ ಕ್ರೇಜ್ ತಗ್ಗಿಲ್ಲ. ಮೊದಲು ಕನ್ನಡದಲ್ಲಿ ಅನಂತರ ಇತರೆ ಭಾಷೆಗಳಲ್ಲಿ ಸಹಾ ಬಿಡುಗಡೆಯಾಗಿ ಕಾಂತಾರ ಅಬ್ಬರಿಸಿದೆ. ಈ ಸಿನಿಮಾ ಪ್ರೇಕ್ಷಕರನ್ನು ಮಾತ್ರವೇ ಅಲ್ಲದೇ ಸಿನಿಮಾ ಸೆಲೆಬ್ರಿಟಿಗಳನ್ನು ಸಹಾ ರಂಜಿಸುತ್ತದೆ. ಸೆಲೆಬ್ರಿಟಿಗಳು ಸಹಾ ಬಿಡುವಿನ ಸಮಯದಲ್ಲಿ ಸಿನಿಮಾವನ್ನು ನೋಡಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ನೋಡಿದ ನಂತರ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ಬಗ್ಗೆ ತಮ್ಮ ಮೆಚ್ಚುಗೆಯನ್ನು ನೀಡುತ್ತಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ಜೊತೆಗೆ ಒಂದಷ್ಟು ಸಾಲುಗಳನ್ನು ಸಹಾ ಬರೆದುಕೊಂಡಿದ್ದಾರೆ.

ಕಾಂತಾರ ನೋಡಿದ ನಂತರ ಸೂಪರ್ ಸ್ಟಾರ್ ರಜನೀಕಾಂತ್ ಅವರು ಸಹಾ ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಸತ್ಕಾರ ಮಾಡಿದ್ದರು. ಇದಲ್ಲದೇ ಬಾಲಿವುಡ್ ನಲ್ಲಿ ಕಂಗನಾ, ಶಿಲ್ಪಾ ಶೆಟ್ಟಿ ಮತ್ತು ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೀಗೆ ಬಹಳಷ್ಟು ಜನರು ಕಾಂತಾರ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈಗ ಇವೆಲ್ಲವುಗಳ ನಂತರ ಬಾಲಿವುಡ್ ನ ಹಿರಿಯ ನಟ ಸುನೀಲ್ ಶೆಟ್ಟಿ ಅವರು ಕಾಂತಾರ ಸಿನಿಮಾದ ಬಗ್ಗೆ ಮಾತನಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದು, ಸುದ್ದಿಯಾಗಿದ್ದಾರೆ.‌

ಸುನೀಲ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ನಾನು ಕಾಂತಾರ ಸಿನಿಮಾವನ್ನು ನೋಡಿದೆ. ನನಗೆ ಅರಿವಿಲ್ಲದಂತೆ ಕಣ್ಣೀರು ಬಂತು. ನಾನು ತುಂವಾ ಭಾವುಕನಾಗಿಬಿಟ್ಟೆ. ಏಕೆಂದರೆ ನಾನು ಸಹಾ ಅದೇ ನೆಲದವನು. ಅಲ್ಲಿ ಹುಟ್ಟಿ ಬೆಳದವನು. ಅದಕ್ಕೆ ಕಾಂತಾರ ಸಿನಿಮಾ ನನಗೆ ಬಹಳ ಬೇಗ ಕನೆಕ್ಟ್ ಆಯಿತು ಎನ್ನುವ ಮಾತುಗಳನ್ನು ಹೇಳಿಕೊಂಡಿದ್ದಾರೆ. ಸುನೀಲ್ ಶೆಟ್ಟಿ ಅವರು ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶಕ ಎರಡನ್ನೂ ಸಹಾ ಹೊಗಳಿದ್ದಾರೆ. ಇಡೀ ಸಿನಿಮಾವನ್ನು ರಿಷಬ್ ಆವರಿಸಿಕೊಂಡಿದ್ದು, ಗ್ರೇಟ್ ಜಾಬ್ ಎಂದು ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ.

ಕಾಂತಾರ ಸಿನಿಮಾ ಯಶಸ್ವಿ ಐವತ್ತು ದಿನಗಳನ್ನು ಪೂರೈಸಿದೆ. ರಾಜ್ಯದಲ್ಲಿ ಮಾತ್ರವೇ ಅಲ್ಲದೇ ವಿದೇಶಗಳಲ್ಲೂ ಸಹಾ ಸಿನಿಮಾ ಐವತ್ತು ದಿನಗಳನ್ನು ಪೂರೈಸಿ, ಶತ ದಿನೋತ್ಸವದ ಕಡೆಗೆ ಮುನ್ನುಗ್ಗುತ್ತಿದೆ. ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಹಾ ಬಿಡುಗಡೆಯಾಗಿರುವ ಕಾಂತಾರ ಶೀಘ್ರದಲ್ಲೇ ಅಲ್ಲಿ ಸಹಾ ಐವತ್ತು ದಿನಗಳನ್ನು ಪೂರೈಸಲಿದೆ. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಹೊಂಬಾಳೆ ಫಿಲ್ಮ್ಸ್ ಇದೀಗ ಮತ್ತೊಮ್ಮೆ ಕಾಂತಾರ ಸಿನಿಮಾದ ಮೂಲಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಂಬಾಳೆ ಫಿಲ್ಮ್ಸ್ ಸದ್ದು ಮಾಡಿದೆ.

Leave a Comment