ನರ್ಸ್ ಹಾಟ್ ಆಗಿದ್ಲು: ನಟನ ಮಾತಿಂದ ಹೊತ್ತಿಕೊಂಡ ಕಿಚ್ಚು, ಕ್ಷಮೆ ಕೇಳಿದ ನಟ ಸಿಂಹ ನಂದಮೂರಿ ಬಾಲಕೃಷ್ಣ

Written by Soma Shekar

Published on:

---Join Our Channel---

ತೆಲುಗು ಸಿನಿಮಾ(Tollywood) ರಂಗದ ಹಿರಿಯ ನಟ, ಸ್ಟಾರ್ ನಟ ಕೂಡ ಆಗಿರುವ ನಂದಮೂರಿ ಬಾಲಕೃಷ್ಣ (Nandamuri Balakrishna) ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾಗಳು ಮತ್ತು ಓಟಿಟಿಯಲ್ಲಿ ತಾವು ನಡೆಸಿಕೊಡುತ್ತಿರುವ ಟಾಕ್ ಶೋ ಸಕ್ಸಸ್ ನಿಂದ ಬಹಳಷ್ಟು ಖುಷಿಯಲ್ಲಿದ್ದಾರೆ. ಮತ್ತೊಮ್ಮೆ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟ ಕೆಲವೊಂದು ಸಂದರ್ಭಗಳಲ್ಲಿ ಆಡುತ್ತಿರುವ ಮಾತುಗಳು ಹಾಗೂ ನೀಡುತ್ತಿರುವ ಹೇಳಿಕೆಗಳು ದೊಡ್ಡ ಚರ್ಚೆ ಮತ್ತು ವಿ ವಾ ದ ಗಳನ್ನು ಹುಟ್ಟು ಹಾಕುತ್ತಿವೆ. ಕೆಲವೇ ದಿನಗಳ ಹಿಂದೆಯಷ್ಟೇ ನಂದಮೂರಿ ಬಾಲಕೃಷ್ಣ ಅವರು ತೆಲುಗಿನ ಜನಪ್ರಿಯ ಹಿರಿಯ ನಟ, ದಿವಂಗತ ಅಕ್ಕಿನೇನಿ ನಾಗೇಶ್ವರ್ ರಾವ್ (Akkineni Nageshwar Rao) ಅವರ ಬಗ್ಗೆ ಮಾಡಿದ ವ್ಯಂಗ್ಯ ಪದ ಬಳಕೆಯು ದೊಡ್ಡ ಸುದ್ದಿಯೇ ಆಗಿತ್ತು.

ನಟ ನಾಗಾರ್ಜುನ(Nagarjuna) ಅವರ ಇಬ್ಬರೂ ಮಕ್ಕಳು ಹಾಗೂ ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಅಭಿಮಾನಿ ಸಂಘ ಇದರ ಬಗ್ಗೆ ಅಸಮಾಧಾನವನ್ನು ಹೊರಹಾಕಿತ್ತು. ಈಗ ಇವೆಲ್ಲವುಗಳ ಬೆನ್ನಲ್ಲೇ ನಂದಮೂರಿ ಬಾಲಕೃಷ್ಣ(Nandamuri Balakrishna) ಅವರು ಆಡಿದ ಮಾತೊಂದರ ಕಾರಣವಾಗಿ ಆಂಧ್ರ ಪ್ರದೇಶ್ ನರ್ಸಿಂಗ್ ವೆಲ್ಫೇರ್ ಅಸೋಸಿಯೇಷನ್ ನಟನ ವಿ ರು ದ್ಧ ಧರಣಿಯನ್ನು ಮಾಡಿದ್ದು, ಕೊನೆಗೆ ನಂದಮೂರಿ ಬಾಲಕೃಷ್ಣ ಅವರು ತಾವು ಆಡಿದ ಮಾತುಗಳಿಗೆ ಕ್ಷಮಾಪಣೆಯನ್ನು ಕೇಳಿದ್ದಾರೆ. ಹಾಗಾದರೆ ನಂದಮೂರಿ ಬಾಲಕೃಷ್ಣ ಅವರು ಹೇಳಿದ್ದಾದರೂ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಇದನ್ನೂ ಓದಿ: ಮತಾಂಧರು ಬೊಗಳ್ತಾರೆ ಅಷ್ಟೇ ಕಚ್ಚಲ್ಲ: ಪಠಾಣ್ ನ ಟೀಕೆ ಮಾಡಿದವರಿಗೆ ಮಾತಿನ ಚಾಟಿ ಬೀಸಿದ ಪ್ರಕಾಶ್ ರೈ

ಆಹಾ ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಅನ್ ಸ್ಥಾಪಬಲ್ ಟಾಕ್ ಶೋ ನ ಎರಡನೇ ಸೀಸನ್ ಭರ್ಜರಿಯಾಗಿ ನಡೆಯುತ್ತಿದ್ದು, ಇತ್ತೀಚಿಗಷ್ಟೆ ಮತ್ತೊಬ್ಬ ಸ್ಟಾರ್ ನಟ ಪವನ್ ಕಲ್ಯಾಣ್(Pavan Kalyan) ಅತಿಥಿಯಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರು ನಟರ ನಡುವೆ ಸಂಭಾಷಣೆ ನಡೆಯುವಾಗ ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ ಕಾಲೇಜು ದಿನಗಳನ್ನು (Bala Krishna College days) ಸ್ಮರಿಸಿಕೊಂಡು, ಒಂದು ಆಸಕ್ತಿಕರ ವಿಚಾರವನ್ನು ಹಂಚಿಕೊಂಡರು.

ಬಾಲಕೃಷ್ಣ ಮಾತನಾಡುತ್ತಾ ನಿಜಾಂ ಕಾಲೇಜ್(Nizam College) ದಿನಗಳಲ್ಲಿ ನನಗೆ ಒಂದು ಅ ಪ ಘಾತವಾಗಿತ್ತು. ನಾನು ಆಸ್ಪತ್ರೆಗೆ ದಾಖಲಾಗಿದ್ದೆ. ಆಸ್ಪತ್ರೆಯಲ್ಲಿ ನನ್ನನ್ನು ಆರೈಕೆ ಮಾಡುತ್ತಿದ್ದ ನರ್ಸ್ ಬಹಳ ಹಾಟ್ ಆಗಿದ್ದಳು. ಆಕೆಯನ್ನು ನೋಡಿದ ಮೇಲೆ ನಾನು ಆಸ್ಪತ್ರೆಯಲ್ಲಿ ಇನ್ನು ಸ್ವಲ್ಪ ದಿನ ಇರಬೇಕೆಂದುಕೊಂಡಿದ್ದೆ ಎನ್ನುವ ಮಾತನ್ನು ಹೇಳಿದರು. ಈ ಮಾತು ವೈರಲ್ ಆದ ಮೇಲೆ ಆಂಧ್ರ ಪ್ರದೇಶ್ ನರ್ಸಿಂಗ್ ವೆಲ್ಫೇರ್ ಅಸೋಸಿಯೇಷನ್ ನಟ ವಿ ರು ದ್ಧ ಧರಣಿ ಮಾಡಿದ್ದು, ವಿಷಯ ತೀವ್ರ ಮಟ್ಟಕ್ಕೆ ಹೋಗುವ ಮೊದಲೇ ನಂದಮೂರಿ ಬಾಲಕೃಷ್ಣ ತಮ್ಮ ಮಾತಿಗೆ ಕ್ಷಮಾಪಣೆಯನ್ನು ಕೇಳಿದ್ದಾರೆ.

Leave a Comment