ಆಸ್ಕರ್ ಗೆದ್ದ ಕೂಡಲೇ ಉಲ್ಟಾ ಹೊಡೆದ ತಮ್ಮಾರೆಡ್ಡಿ: RRR ಬಗ್ಗೆ ಎಗರಾಡಿದ್ದ ನಿರ್ದೇಶಕ ಈಗ ಹೇಳಿದ್ದು ಶಾಕಿಂಗ್

Written by Soma Shekar

Published on:

---Join Our Channel---

Kannada news: ತ್ರಿಬಲ್ ಆರ್(RRR)) ಸಿನಿಮಾದ ನಾಟು ನಾಟು (Natu Natu) ಹಾಡಿಗೆ ಆಸ್ಕರ್ (Oscar) ಪ್ರಶಸ್ತಿ ಬಂದಿರುವುದು ಇಡೀ ದೇಶಕ್ಕೆ ಒಂದು ಸಂತಸದ ಕ್ಷಣವೆಂದೇ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಮಟ್ಟದ ಮೆಚ್ಚುಗೆ ಗಳು ಹರಿದು ಬಂದಿದೆ. ಅದೇ ವೇಳೆ ಒಂದಷ್ಟು ನೆಗೆಟಿವ್ ಆಲೋಚನೆಗಳು ಸಹಾ ಮಾದ್ಯಮಗಳಲ್ಲಿ ಹರಿದಾಡುತ್ತಿದೆ. ತ್ರಿಬಲ್ ಆರ್ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸಹಾ ಸಿನಿಮಾ ದೊಡ್ಡ ಸದ್ದನ್ನು ಮಾಡುತ್ತಲೇ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಆಸ್ಕರ್ ನ ನಿರೀಕ್ಷೆಯಲ್ಲಿತ್ತು. ಈಗ ಆ ಕನಸು ಸಹಾ ನನಸಾಗಿದೆ.

ಹಾಲಿವುಡ್ ಅಂಗಳದಲ್ಲಿ ತ್ರಿಬಲ್ ಆರ್ ಸಿನಿಮಾದ ಪ್ರಚಾರ ಕಾರ್ಯಗಳು ಸಹಾ ಬಹಳ ಜೋರಾಗಿ ನಡೆದಿತ್ತು. ಈ ವಿಚಾರವಾಗಿ ತೆಲುಗಿನಲ್ಲಿ ಸಿನಿಮಾ ನಿರ್ಮಾಪಕ ತಮ್ಮಾರಡ್ಡಿ ಭರದ್ವಾಜ್(Thamma Reddy Bhardwaj) ಬಹಳ ಸಾಕಷ್ಟು ಮಾತನಾಡಿದ್ದರು. ಅಸಮಾಧಾನ ಹೊರ ಹಾಕಿದ್ದರು. ತಮ್ಮಾರೆಡ್ಡಿ ಮಾತನಾಡುತ್ತಾ, ತ್ರಿಬಲ್ ಆರ್ ಆಸ್ಕರ್ ಗಾಗಿ ಎಂಬತ್ತು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆ ಹಣದಿಂದ ಹತ್ತು ಸಿನಿಮಾಗಳನ್ನು ತೆಗೆದು ಮುಖಕ್ಕೆ ಎಸೆಯುತ್ತೇನೆ ಎಂದು ನಾಲಗೆ ಹರಿ ಬಿಟ್ಟಿದ್ದರು. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದೆ.

ಈಗ ತ್ರಿಬಲ್ ಆರ್(RRR) ಸಿನಿಮಾದ ಹಾಡಿಗೆ ನಾಟು ನಾಟು ಹಾಡಿಗೆ ಆಸ್ಕರ್ ಬಂದ ಮೇಲೆ ತಮ್ಮಾರೆಡ್ಡಿ ಭಾರದ್ವಾಜ್ ಅವರು ಈಗ ಪ್ರತಿಕ್ರಿಯೆ ನೀಡುತ್ತಾ, ಸಿನಿಮಾ ಯೂನಿಟ್ ಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೇ ತ್ರಿಬಲ್ ಆರ್ ಆಸ್ಕರ್ ಪ್ರಶಸ್ತಿಯನ್ನು ಪಡೆದಿರುವುದು ತೆಲುಗು ಪ್ರಜೆಗಳೆಲ್ಲರಿಗೂ ಕೂಡಾ ಹೆಮ್ಮೆಯ ವಿಷಯವಾಗಿದೆ ಎಂದು ಹಾಡಿ ಹೊಗಳಿದ್ದಾರೆ. ಮೊದಲು ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಮಾತನಾಡಿದ್ದ ವ್ಯಕ್ತಿ ಈಗ ಸಿನಿಮಾ ಪ್ರಶಸ್ತಿ ಗೆದ್ದ ನಂತರ ತಮ್ಮ‌ ಮಾತಿನ ವರಸೆ ಬದಲಿಸಿ ಅಚ್ಚರಿ ಮೂಡಿಸಿದ್ದಾರೆ.

Leave a Comment