ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಗಳದ್ದೇ ದೊಡ್ಡ ಸಾಮ್ರಾಜ್ಯ. ಕಿರುತೆರೆಯಲ್ಲಿ ಸೀರಿಯಲ್ ಗಳನ್ನು ನೋಡುವ ದೊಡ್ಡ ಮಟ್ಟದ ಪ್ರೇಕ್ಷಕರು ಇದ್ದಾರೆ. ಆದ್ದರಿಂದಲೇ ಕೆಲವು ಧಾರಾವಾಹಿಗಳು ಈಗಾಗಲೇ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡು, ಅದೇ ಮಟ್ಟದಲ್ಲಿ ಯಶಸ್ಸನ್ನು ಕೂಡಾ ತಮ್ಮದಾಗಿಸಿಕೊಂಡಿವೆ. ಆದರೆ ಎಲ್ಲಾ ಧಾರವಾಹಿ ಗಳು ಎಲ್ಲರಿಗೂ ಅಚ್ಚುಮೆಚ್ಚಿನವು ಆಗುತ್ತವೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಒಬ್ಬೊಬ್ಬರ ಆಯ್ಕೆ ಒಂದೊಂದು ಆಗಿರುತ್ತದೆ. ಆದ್ದರಿಂದಲೇ ಧಾರಾವಾಹಿಗಳ ಜನಪ್ರಿಯತೆ ಆಧಾರದ ಮೇಲೆ ಅವುಗಳ ಸ್ಥಾನವು ಕೂಡ ಆಗಾಗ ಬದಲಾಗುತ್ತಿರುತ್ತದೆ.
ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಹೊಸ ತಿರುವುಗಳು, ಆಸಕ್ತಿಕರ ಘಟ್ಟಗಳು ಬಂದಾಗ ಸಹಜವಾಗಿಯೇ ಹೆಚ್ಚಿನ ಜನರ ಗಮನವನ್ನು ಸೆಳೆಯುತ್ತದೆ, ಹೀಗೆ ಹೆಚ್ಚು ಜನರು ನೋಡುವ ಧಾರಾವಾಹಿ ಟಾಪ್ ಸ್ಥಾನವನ್ನು ತನ್ನದಾಗಿಸಿಕೊಳ್ಳುತ್ತದೆ, ಅಲ್ಲದೇ ಟಾಪ್ ನಲ್ಲಿದ್ದ ಧಾರಾವಾಹಿ ಬಗ್ಗೆ ಜನರು ಆಸಕ್ತಿ ಕಳೆದುಕೊಂಡರೆ ಅದು ಟಾಪ್ ಸೀರಿಯಲ್ ಗಳ ರೇಸ್ ನಿಂದ ಹೊರಗೆ ಉಳಿಯಬೇಕಾಗುತ್ತದೆ. ಇನ್ನು ಈಗ ಹೊರಬಂದಿರುವ ಪಿ ಆರ್ ಪಿ ರೇಟಿಂಗ್ ಪ್ರಕಾರ ಕನ್ನಡ ಕಿರುತೆರೆಯಲ್ಲಿ ಯಾವ ಧಾರಾವಾಹಿಗಳು ಟಾಪಲ್ಲಿ ಯಾವ ಯಾವ ಸ್ಥಾನವನ್ನು ತಮ್ಮದಾಗಿಸಿಕೊಂಡಿವೆ ತಿಳಿಯೋಣ ಬನ್ನಿ.
ಕಳೆದ ವಾರದ ಟಿ ಆರ್ ಪಿ ಪ್ರಕಾರ ಈ ವಾರ ಟಾಪ್ ಐದು ಸ್ಥಾನಗಳಲ್ಲಿರುವ ಆ ಧಾರಾವಾಹಿಗಳು ಯಾವುದು ಎನ್ನುವುದನ್ನು ನಾವೀಗ ತಿಳಿದುಕೊಳ್ಳೋಣ. ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕನ್ನಡದ ನಂಬರ್ ಒನ್ ಮನರಂಜನಾ ವಾಹಿನಿಯಾಗಿರುವ ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳೇ ಟಾಪ್ ಐದು ಸ್ಥಾನವನ್ನು ಪಡೆದುಕೊಂಡು ಮಿಂಚುತ್ತಿವೆ. ಜೀ ಕನ್ನಡ ಮತ್ತೊಮ್ಮೆ ಬೇರೆ ವಾಹಿನಿಗಳನ್ನು ಟಿ ಆರ್ ಪಿ ಯಲ್ಲಿ ಹಿಂದಿಕ್ಕಿದೆ.
ವಾಹಿನಿಯಲ್ಲಿ ಕೆಲವೇ ದಿನಗಳ ಹಿಂದಷ್ಟೇ ಪ್ರಾರಂಭವಾಗಿರುವ, ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಉಮಾಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಉತ್ತಮವಾದ ಟಿ ಆರ್ ಪಿ ಪಡೆದು ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಧಾರಾವಾಹಿ ಆರಂಭವಾದ ಮೊದಲನೇ ವಾರದಲ್ಲೇ ಮೊದಲ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದಿತ್ತು. ಈಗ ಅದೇ ಓಟವನ್ನು ಮುಂದುವರಿಸಿರುವ ಪುಟ್ಟಕ್ಕನ ಮಕ್ಕಳು ನಂಬರ್ ಒನ್ ಸ್ಥಾನದಲ್ಲಿ ಉಳಿದುಕೊಂಡಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಂತರ ಎರಡನೇ ಸ್ಥಾನವನ್ನು ಇದೇ ವಾಹಿನಿಯ ಮತ್ತೊಂದು ಜನಪ್ರಿಯ ಧಾರಾವಾಹಿ ತನ್ನದಾಗಿಸಿಕೊಂಡಿದೆ. ಹೌದು ಗಟ್ಟಿಮೇಳ ಧಾರಾವಾಹಿ ಈ ವಾರದ ಟಿ ಆರ್ ಪಿ ರೇಟಿಂಗ್ ಪ್ರಕಾರ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸೀರಿಯಲ್ ನ ನಾಯಕ ವೇದಾಂತ್ ಹಾಗೂ ಅಮೂಲ್ಯ ಮದುವೆಯ ಎಪಿಸೋಡ್ ಗಳು ಪ್ರಸಾರವಾಗುವ ದಿನಗಳಲ್ಲಿ ಗಟ್ಟಿಮೇಳ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡು, ಕೆಲವು ವಾರಗಳ ಕಾಲ ಮೊದಲನೇ ಸ್ಥಾನದಲ್ಲಿ ಬೀಗಿತ್ತು. ಈಗ ಧಾರಾವಹಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಒಂದು ಆಸಕ್ತಿಕರ ಕಥಾಹಂದರ ದೊಂದಿಗೆ ಕೆಲವೇ ತಿಂಗಳುಗಳ ಹಿಂದೆಯಷ್ಟೇ ಪ್ರಾರಂಭವಾದ ನಟ ದಿಲೀಪ್ ರಾಜ್ ನಾಯಕನಾಗಿ ಮತ್ತು ಮಲೈಕಾ ಟಿ ವಸುಪತಿ ನಾಯಕಿಯಾಗಿ ಕಾಣಿಸಿಕೊಂಡಿರುವ ಎಜೆ ಮತ್ತು ಲೀಲಾ ನಡುವಿನ ಎಡವಟ್ಟುಗಳ ಹಿಟ್ಲರ್ ಕಲ್ಯಾಣ ಧಾರಾವಾಹಿ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ಸನ್ನು ಪಡೆದುಕೊಂಡಿದೆ. ಆರಂಭದಿಂದಲೂ ಜನರನ್ನು ರಂಜಿಸುತ್ತಾ ಬಂದಿರುವ ಈ ಧಾರಾವಾಹಿ ಈ ವಾರ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವನ್ನು ಆರಂಭಿಸಿದ ಕೂಡಲೇ ಹೊಸ ದಾಖಲೆಯನ್ನು ಬರೆದು ಕೆಲವು ತಿಂಗಳುಗಳ ಕಾಲ ನಂಬರ್ 1 ಸ್ಥಾನವನ್ನು ತನ್ನದಾಗಿಸಿಕೊಂಡಿದ್ದ, ಬಹು ಜನಪ್ರಿಯ ಧಾರಾವಾಹಿ ಜೊತೆ ಜೊತೆಯಲಿ ಈ ವಾರ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿ ಕಳೆದ ಕೆಲವು ತಿಂಗಳುಗಳಿಂದಲೂ ಟಾಪ್ 3 ಮತ್ತು 4ನೇ ಸ್ಥಾನಗಳಲ್ಲಿ ತೃಪ್ತಿ ಪಡುವಂತಾಗಿದೆ. ಸೀರಿಯಲ್ ಮತ್ತೆ ನಂಬರ್ ಒನ್ ಸ್ಥಾನವನ್ನು ಯಾವಾಗ ಪಡೆದುಕೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
ಇನ್ನು ಈ ವಾರ ಟಾಪ್ 5 ನೇ ಸ್ಥಾನವನ್ನು ತನ್ನದಾಗಿಸಿಕೊಂಡಿರುವ ಧಾರಾವಾಹಿ ಸತ್ಯ. ತನ್ನ ಕುಟುಂಬಕ್ಕಾಗಿ ಧೈರ್ಯವಂತ ಹೆಣ್ಣುಮಗಳಾಗಿ ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಗಟ್ಟಿಗಿತ್ತಿ ಸತ್ಯ ಳ ಕಥಾ ಹಂದರದ ಈ ಧಾರಾವಾಹಿ ಆರಂಭದಲ್ಲಿ ನಂಬರ್ ಒನ್ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಆದರೆ ದಿನ ಕಳೆದಂತೆ ಒಂದೊಂದೇ ಸ್ಥಾನ ಕೆಳಗೆ ಬಂದು ಈಗ ಸತ್ಯ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.