ಜೋಗತಿ ನುಡಿದ ಸತ್ಯಕ್ಕೆ ಬೆಚ್ಚಿದ ಪುಷ್ಪ: ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಮೆಗಾ ಟ್ವಿಸ್ಟ್!

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಯ ಸಮಯ ಬದಲಾಗಿದೆ. ಇಷ್ಟು ದಿನ ಸೀರಿಯಲ್ ಪ್ರಸಾರವಾಗುತ್ತಿದ್ದ ಸಮಯದ ಬದಲಾಗಿ ಇದೀಗ 9:30 ಕ್ಕೆ ನಾಗಿಣಿ ಸೀರಿಯಲ್ ನ ಸಮಯಕ್ಕೆ ಬಂದಿದೆ. ಜೊತೆ ಜೊತೆಯಲಿ ಸೀರಿಯಲ್ ಪ್ರಸಾರ ಆರಂಭಿಸಿದ ನಂತರ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅನೇಕ ತಿಂಗಳುಗಳ ಕಾಲ ಟಾಪ್ ಒನ್ ಸೀರಿಯಲ್ ಸ್ಥಾನವನ್ನು ಈ ಸೀರಿಯಲ್ ತನ್ನದಾಗಿಸಿಕೊಂಡಿತ್ತು. ಅನಂತರ ಕೂಡಾ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದ್ದ ಜೊತೆ ಜೊತೆಯಲಿ ಸೀರಿಯಲ್ ಕೆಲವೇ ದಿನಗಳ ಹಿಂದೆಯಷ್ಟೇ ವಿ ವಾ ದ ಒಂದರಿಂದಾಗಿ ಸಿಕ್ಕಾಪಟ್ಟೆ ಸುದ್ದಿ ಮಾಡಿತ್ತು. ಏಕೆಂದರೆ ಸೀರಿಯಲ್ ನಲ್ಲಿ ಸಖತ್ ಜನಪ್ರಿಯತೆ ಪಡೆದಿದ್ದ ಆರ್ಯವರ್ಧನ್ ಪಾತ್ರದಿಂದ ನಟ ಅನಿರುದ್ಧ್ ಅವರು ಹೊರ ಬಂದಿದ್ದು.

ಹೌದು, ಸೀರಿಯಲ್ ಕಥೆಯಲ್ಲಿ ಪ್ರಮುಖ ತಿರುವು ಬಂದಾಗಲೇ ನಟ ಅನಿರುದ್ಧ್ ಅವರು ಹೊರ ಬಂದಿದ್ದು ಸೀರಿಯಲ್ ಮತ್ತು ನಟನ ಅಭಿಮಾನಿಗಳಿಗೆ ಇದು ತೀವ್ರ ನಿರಾಶೆಯನ್ನು ಮೂಡಿಸಿತ್ತು. ಇನ್ನು ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಟನ ಕರೆ ತರಲು ಕಥೆಯಲ್ಲಿ ಮಾಡಲಾದ ಕಸರತ್ತಿನ ಪರಿಣಾಮವಾಗಿ ಆರ್ಯವರ್ಧನ್ ಪಾತ್ರಕ್ಕೆ ನಟ ಹರೀಶ್ ರಾಜ್ ಅವರು ಎಂಟ್ರಿ ನೀಡಿದ್ದಾರೆ. ಆದರೆ ಕಥೆಯಲ್ಲಿ ಮಾತ್ರ ಆ ಪಾತ್ರ ಆರ್ಯವರ್ಧನ್ ಎನ್ನುವುದು ಇನ್ನೂ ಯಾರಿಗೂ ತಿಳಿದಿಲ್ಲ. ಹಿಂದಿನದೇನೂ ನೆನಪಿಲ್ಲದ ವಿಶ್ವಾಸ್ ದೇಸಾಯಿ ಆಗಿ ಆರ್ಯವರ್ಧನ್ ಇದ್ದು, ಹಳೆಯ ನೆನಪುಗಳನ್ನು ಪಡೆಯಲು ಚಿಕಿತ್ಸೆ ನಡೆಯುತ್ತಿದೆ.

ಸೀರಿಯಲ್ ಕಥೆಯಲ್ಲಿ ಎಲ್ಲರ ಪಾಲಿಗೆ ಆರ್ಯವರ್ಧನ್ ಸತ್ತಿದ್ದಾನೆ. ಆದರೆ ಕೆಲವರಿಗೆ ಮಾತ್ರವೇ ಆರ್ಯವರ್ಧನ್ ಬದುಕಿದ್ದು, ಪೋಲಿಸರು ಹಾಕಿರುವ ಷರತ್ತಿನ ಕಾರಣ ಅದನ್ನು ಇನ್ನು ಹೊರಗೆ ಹೇಳಲಾಗುತ್ತಿಲ್ಲ. ಆದರೆ ಈಗ ಇವೆಲ್ಲವುಗಳ ನಡುವೆಯೇ ಹೊಸ ಟ್ವಿಸ್ಟ್ ಎನ್ನುವಂತೆ ಅನು ಸಿರಿಮನೆ ಅವರ ತಾಯಿ ಪುಷ್ಪ ಮುಂದೆ ಆರ್ಯವರ್ಧನ್ ಬದುಕಿದ್ದಾನೆ ಎನ್ನುವ ಸತ್ಯ ರಿವೀಲ್ ಆಗಿದೆ. ಹಾಗಾದ್ರೆ ಪುಷ್ಪ ಮುಂದೆ ಈ ವಿಷಯವನ್ನು ರಿವೀಲ್ ಮಾಡಿದ್ದಾದ್ರು ಯಾರು? ಪುಷ್ಪ ಅದನ್ನು ನಂಬಿದ್ದಾದ್ರು ಯಾಕೆ? ಅನ್ನೋದಾದ್ರೆ ಅಲ್ಲೇ ಇದೆ ದೊಡ್ಡ ಟ್ವಿಸ್ಟ್.

ಹೌದು, ಅನು ಸಿರಿಮನೆ ಅವರು ಬಹಳವಾಗಿ ನಂಬುವ ಜೋಗ್ತವ್ವನು ಅನು ಮನೆಗೆ ಬಂದಿದ್ದು, ಈ ವೇಳೆ ಪುಷ್ಪ ಮಗಳ ನೋವಿನ ಬಗ್ಗೆ ಮಾತನಾಡುತ್ತಾ ಜೋಗತವ್ವನ ಮುಂದೆ ಕಣ್ಣೀರು ಹಾಕಿದಾಗ, ಜೋಗತವ್ವನು ಪುಷ್ಪಗೆ ಸಮಾಧಾನ ಆಗುವಂತಹ ಮಾತನ್ನು ಹೇಳಿದ್ದು, ಅನು ಇನ್ನೂ ಸುಮಂಗಲಿಯಾಗಿದ್ದಾಳೆ. ಆಕೆಯ ಹಣೆ ಮೇಲೆ ಬರೆದಿದ್ದನ್ನು ಯಾರಿಂದಲೂ ತಪ್ಪಿಸೋಕೆ ಸಾಧ್ಯವಿಲ್ಲ. ಆಕೆಗೆ ರಾಜಯೋಗ ಕಾದಿದ್ದು, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದು ಹೇಳಿದ್ದು, ಜೋಗ್ತವ್ವನ ನುಡಿಗಳನ್ನು ಕೇಳಿ ಪುಷ್ಪ ಮನಸ್ಸಿನಲ್ಲಿ ಕೆಲವು ಅನುಮಾನಗಳು ಮತ್ತು ಕುತೂಹಲ ಎರಡೂ ಮೂಡಿದೆ.

Leave a Comment