ಪ್ರೇಕ್ಷಕರ ತಾಳ್ಮೆ ಕೆಡಿಸಿತಾ ಜೊತೆ ಜೊತೆಯಲಿ ಸೀರಿಯಲ್? ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವೇನು?

Written by Soma Shekar

Published on:

---Join Our Channel---

ಕನ್ನಡ ಕಿರುತೆರೆಯಲ್ಲಿ(Kannada small screen) ಅನೇಕ ಸೀರಿಯಲ್ ಗಳು ಪ್ರಸಾರ ಕಾಣುತ್ತವೆ. ಆದರೆ ಇವುಗಳಲ್ಲಿ ಜನರ ಅಪಾರ ಅಭಿಮಾನವನ್ನು ಪಡೆಯುವ ಸೀರಿಯಲ್ ಗಳು ಮಾತ್ರ ಬೆರಳೆಣಿಕೆಯಷ್ಟು ಎನ್ನುವುದು ಸಹಾ ಸತ್ಯ. ಅಂತಹ ಸೀರಿಯಲ್ ಗಳಲ್ಲಿ ಜೊತೆ ಜೊತೆಯಲಿ(jothe jotheyali) ಸೀರಿಯಲ್ ಸಹಾ ಒಂದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದೇಕೋ ಈ ಸೀರಿಯಲ್ ಬಗ್ಗೆ ಕೂಡಾ ಪ್ರೇಕ್ಷಕರಿಗೆ ಮೊದಲಿನಷ್ಟು ಆಸಕ್ತಿ ಖಂಡಿತ ಉಳಿದಿಲ್ಲ. ಆರಂಭದ ದಿನಗಳಲ್ಲಿ ಕಿರುತೆರೆಯಲ್ಲಿ ಹೊಸದೊಂದು ದಾಖಲೆ ಬರೆದು, ಜನ ಮನ್ನಣೆ ಪಡೆದಿದ್ದ ಈ ಸೀರಿಯಲ್ ಇಂದು ಎಲ್ಲಾ ಧಾರಾವಾಹಿಗಳಲ್ಲಿ ತಾನೂ ಒಂದು ಎನ್ನುವಂತೆ ಆಗಿದೆ.

ಹೌದು, ಒಂದು ವಿಭಿನ್ನ ಕಥಾ ಹಂದರ, ಅದಕ್ಕೆ ತಕ್ಕ ಹಾಗೆ ನಡೆಯುವ ಕಥೆ, ಅದರ ವೇಗ, ಸಂಭಾಷಣೆ, ನಟ , ನಟಿಯರ ಪಾತ್ರಗಳು ಎಲ್ಲವೂ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮೂಲಕಥೆಗೂ ಈಗ ಬರುತ್ತಿರುವ ಕಥೆಗೂ ಸಾಮ್ಯತೆಯೇ ಇಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಅಲ್ಲದೇ ಬಹಳಷ್ಟು ಜನರ ಪ್ರಶ್ನೆ ರಾಜನಂದಿನಿಯ(Rajanandini) ಮರು ಜನ್ಮ ಆಗಿದ್ದಾದ್ರೂ ಏತಕ್ಕೆ? ಎನ್ನುವುದಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಸ ಜೊಸ ತಿರುವುಗಳ ಹೆಸರಿನಲ್ಲಿ ಕಥೆಯ ದಿಕ್ಕು ತಪ್ಪಿದೆಯೇನೋ ಎನ್ನುವುದು ಪ್ರೇಕ್ಷಕರ ಅನುಮಾನವಾಗಿದೆ‌.

ಆರ್ಯ ವರ್ಧನ್(Aryavradhan) ಪಾತ್ರದ ನಟನ ಬದಲಾವಣೆ ನಂತರ ಒಂದಷ್ಟು ಜನ ಪ್ರೇಕ್ಷಕರು ಇನ್ಮುಂದೆ ತಾವು ಸೀರಿಯಲ್ ನೋಡೋದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಗಳನ್ನು ಮಾಡಿದ್ದು ಕೂಡಾ ಸತ್ಯ.. ಆದರೂ ಅವೆಲ್ಲವುಗಳ ನಡುವೆಯೇ ಆ ಪಾತ್ರಕ್ಕೆ ಬಂದ ಬೇರೊಬ್ಬ ನಟ ಪಾತ್ರವನ್ನು ನಿಭಾಯಿಸುವಾಗಲೇ, ಆರ್ಯವರ್ಧನ್ ಮತ್ತು ಅನು(Anu Arya) ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಎನ್ನುವಂತೆ ಒಂದಷ್ಟು ಹೊಸ ಹೊಸ ಪಾತ್ರಗಳನ್ನು ಸಹಾ ಪರಿಚಯ ಮಾಡಲಾಗಿದೆ.

ಆರ್ಯವರ್ಧನ್ ಆದ ವಿಶ್ವಾಸ್ ದೇಸಾಯಿಯ ಪತ್ನಿ ಆರಾಧನ ಎಂಟ್ರಿ, ಆಕೆ ಆರ್ಯವರ್ಧನ್ ಹೆಸರಿನಲ್ಲಿ ಇರೋ ತನ್ನ ಪತಿಯ ರೂಪ ನೋಡಿ, ಅಲ್ಲಿ ತನ್ನ ಪತಿಯನ್ನು ಕಾಣುತ್ತಾ, ಆರ್ಯವರ್ಧನ್ ಮತ್ತು ಅನು ನಡುವೆ ಬಂದಿರುವುದು, ಅದಾದ ನಂತರ ಆರಾಧನಾಗೆ ರಾಜನಂದಿನಿ ವಿಲಾಸ ತಾಯಿಯ ತವರು ಅನ್ನೋ ಹೊಸ ಟ್ವಿಸ್ಟ್ , ಆರಾಧನಾ ತಾಯಿ ರಾಜಾ ಸಾಹೇಬರ ತಂಗಿ ಅನ್ನೋ ಸತ್ಯ ಹೀಗೆ ಸಾಕಷ್ಟು ಹೊಸ ಹೊಸ ಕಥೆಗಳು ಹೆಣೆದುಕೊಳ್ಳುತ್ತಾ ಜೊತೆ ಜೊತೆಯಲಿ ಸೀರಿಯಲ್ ಕಥೆ ಎಲ್ಲಿಂದಲೋ ಎಲ್ಲಿಗೋ ಹೋಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಪುನರ್ಜನ್ಮದ ಸೇಡಿನ ಕಥೆಯಾಗಿ ಮೂಡಿ ಬಂದ ಜೊತೆ ಜೊತೆಯಲಿ ಸೀರಿಯಲ್ ಈಗ ಎಲ್ಲಾ ಡೈಲಿ ಸೋಪ್ ಗಳ ತರಹವೇ ಅದೇ ಸಾಮಾನ್ಯ ಕೌಟುಂಬಿಕ ಕಲಹಗಳು, ಖಳ ನಾಯಕಿಯರ ಪಾತ್ರಗಳು ಹೀಗೆ ತೀರಾ ಸಾಮಾನ್ಯ ಎನಿಸುವಂತೆ ಕಾಣುತ್ತಿರುವುದು ವರ್ಷಗಳ ಕಾಲ ಇಷ್ಟಪಟ್ಟು ನೋಡಿದ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಬೇಸರವನ್ನು ಮೂಡಿಸಿರುವುದು, ಜನರ ಸೋಶಿಯಲ್ ಮೀಡಿಯಾ ಕಾಮೆಂಟ್ ಗಳಲ್ಲಿ ತಿಳಿಯುತ್ತಿದೆ.

Leave a Comment