ಕಾಂತಾರ 2 ನ ಪ್ರಮುಖ ಪಾತ್ರದಲ್ಲಿ ರಜನೀಕಾಂತ್: ಕೊನೆಗೂ ಮೌನ ಮುರಿದ ಹೊಂಬಾಳೆ ಫಿಲ್ಮ್ಸ್

Written by Soma Shekar

Published on:

---Join Our Channel---

ಕೆಜಿಎಫ್ (KGF) ಮತ್ತು ಕಾಂತಾರ(Kantara) ದಂತಹ ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಿಸಿದ ಹೊಂಬಾಳೆ ಫಿಲಂಸ್(Hombale films) ತಮಿಳು ಸೂಪರ್ ಸ್ಟಾರ್ ರಜನಿಕಾಂತ್ (Rajanikant) ಅವರನ್ನು ಒಳಗೊಂಡ ಪ್ಯಾನ್ ಇಂಡಿಯಾ ಚಿತ್ರವನ್ನು ರೂಪಿಸುವ ಯೋಜನೆಯೊಂದನ್ನು ಮಾಡುತ್ತಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ. ಹಾಗಾದರೆ ಈ ಸುದ್ದಿ ಎಷ್ಟು ನಿಜ ಎನ್ನುವುದನ್ನು ತಿಳಿಯೋಣ ಬನ್ನಿ. ರಿಷಬ್ ಶೆಟ್ಟಿ ಅವರ ಕಾಂತಾರ(Rishab Shetty Kantara) ಸಿನಿಮಾ ದೇಶದಾದ್ಯಂತ ಭಾರಿ ಸದ್ದನ್ನು ಮಾಡಿತು.

ಇತ್ತೀಚಿಗಷ್ಟೇ ರಿಷಭ್(Rishab) ಅವರು ತಮ್ಮ ಸಿನಿಮಾದ ಪ್ರೀಕ್ವೆಲ್ ಘೋಷಣೆ ಮಾಡಿದಾಗ ಅದು ಸಿನಿಮಾ ಪ್ರಿಯರ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತ್ತು. ಕಾಂತರ 2(Kantara 2) ಮೊದಲ ಭಾಗಕ್ಕಿಂತ ವಿಭಿನ್ನವಾಗಿರುತ್ತದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ಸು, ರಿಷಬ್ ಶೆಟ್ಟಿ ಸಹಾ ಭರವಸೆಯನ್ನು ನೀಡಿದ್ದಾರೆ. ಆದರೆ ಈಗ ಇವೆಲ್ಲವುಗಳ ನಡುವೆ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಕಾಂತಾರ 2 ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿದೆ.

ಕಾಂತಾರ ಸಿನಿಮಾದ ಶತದಿನೋತ್ಸವ ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅವರು ಮಾತನಾಡುತ್ತಾ, ಕಾಂತಾರ 2 ಸಿನಿಮಾದ ಬಗ್ಗೆ ಹೇಳುತ್ತಾ, ಕಾಂತಾರ 2 ಸಿನಿಮಾದ ತಯಾರಿಯನ್ನು ನಡೆಸಲಾಗುತ್ತಿದ್ದು, ಕಾಂತಾರದ ಫ್ರಿಕ್ವೆಲ್ ಬಹಳಷ್ಟು ಅಚ್ಚರಿಗಳಿಂದ ತುಂಬಿರುತ್ತದೆ ಮತ್ತು ವಿಭಿನ್ನವಾಗಿರುತ್ತದೆ ಎನ್ನುವ ಮಾತನ್ನು ಹೇಳಿದ್ದರು. ಅದಾದ ನಂತರ ಈ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಕುತೂಹಲ ಮೂಡಿತ್ತು. ಇದನ್ನೂ ಓದಿ: ಕೊನೆಯ ಕ್ಷಣದಲ್ಲಿ ಅನಂತ್ ನಾಗ್ ಗೈರು: ಕುತೂಹಲ ಮೂಡಿಸಿದ ಹಿರಿಯ ನಟನ ನಡೆ, ಬಿಜೆಪಿಗೆ ಸೇರಲ್ವಾ?

ಅದೇ ವೇಳೆ ಕೆಲವು ಸುದ್ದಿಗಳಲ್ಲಿ ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಮಂಗಳೂರಿಗೆ ಆಗಮಿಸಿರುವ ನಟ ರಜನಿಕಾಂತ್(Rajanikant Mangalore) ಅವರನ್ನು ಹೊಂಬಾಳೆ ಫಿಲಂಸ್ ಭೇಟಿ ಮಾಡಿದ್ದು ಕಾಂತಾರ 2 ಸಿನಿಮಾದ ಬಗ್ಗೆ ಅವರೊಡನೆ ಚರ್ಚೆ ನಡೆಸಲಾಗಿದೆ ಎಂದು ಕೂಡಾ ಹೇಳಲಾಯಿತು. ರಜನೀಕಾಂತ್ ಅವರು ಕಾಂತಾರ 2 ನಲ್ಲಿ ಅತಿಥಿ ಪಾತ್ರಕ್ಕೆ ಆಗಮಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದವು. ಇದನ್ನೂ ಓದಿ : ಆದಿಲ್ ಗೆ ವಿಚ್ಚೇದನ ಕೊಡಲ್ಲ, ಹಿಂದೂ ಮುಸ್ಲಿಂ ಮದ್ವೆ ಆಗಬಾರ್ದ? ರಾಖಿ ಹೊಸ ಹೈ ಡ್ರಾಮ

ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹೊಂಬಾಳೆ ಫಿಲಂಸ್, ಹರಡಿರುವ ಎಲ್ಲಾ ಸುದ್ದಿಗಳು ಸಹಾ 100% ಸುಳ್ಳು ಸುದ್ದಿಗಳಾಗಿದೆ. ನಾವು ಮಂಗಳೂರಿಗೆ ಹೋಗಿಲ್ಲ ಹಾಗೂ ರಜನಿಕಾಂತ್ ಅವರನ್ನು ಭೇಟಿ ಮಾಡಿಲ್ಲ. ಅವರನ್ನು ನಮ್ಮ ಸಿನಿಮಾದಲ್ಲಿ ನಟಿಸಲು ಕೇಳಿಲ್ಲ. ಈಗ ಹರಡಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎನ್ನುವ ಮಾತುಗಳನ್ನು ಮಾಧ್ಯಮವೊಂದಕ್ಕೆ ತಿಳಿಸಿದ್ದು, ಕಾಂತಾರ 2 ನಲ್ಲಿ ರಜನೀಕಾಂತ್ ಎನ್ನುವ ಸುದ್ದಿಗೆ ಸ್ಪಷ್ಟನೆ ನೀಡಲಾಗಿದೆ.

Leave a Comment