ಅಷ್ಟೆಲ್ಲಾ ಅರಚಾಡಿ, ಅರುಣ್ ಸಾಗರ್ ಮಾಡಿದ್ದೇನು? ಇಷ್ಟೆಲ್ಲಾ ನಾಟಕ ಯಾಕೆ? ಸಿಟ್ಟಾದ್ರ ನೆಟ್ಟಿಗರು?

Written by Soma Shekar

Published on:

---Join Our Channel---

ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ಶಾಂತವಾಗಿದ್ದ ಅರುಣ್ ಸಾಗರ್ ಅವರು ಮನೆ ಮಂದಿಯ ಮೇಲೆ ಫೈರ್ ಆಗಿದ್ದರು. ಸದಾ ತಮಾಷೆ ಮಾಡುತ್ತಾ, ಮನೆ ಮಂದಿಯನ್ನು ನಗಿಸುತ್ತಿದ್ದ ಅವರ ಈ ಉಗ್ರ ರೂಪವನ್ನು ನೋಡಿದ ಮನೆ ಮಂದಿ ಶಾ ಕ್ ಆಗಿದ್ದರು. ಅರುಣ್ ಸಾಗರ್ ಅವರು ಮನೆಯಲ್ಲಿ ಅರಚಾಡಿ, ಕೂಗಾಡಿ ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದರು. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಅವರು ಮಾಡಿರುವ ವರ್ತನೆ ಮನೆ ಮಂದಿಗೆ ಮಾತ್ರವೇ ಅಲ್ಲದೇ ಪ್ರೇಕ್ಷಕರಿಗೆ ಸಹಾ ಶಾ ಕ್ ನೀಡಿದೆ. ಅರುಣ್ ಸಾಗರ್ ಅವರು ಇದೆಂತಾ ಆಟ ಆಡುತ್ತಿದ್ದಾರೆ ಎನ್ನುವ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿದೆ. ಅವರು ಮಾಡಿದ್ದು ಸರಿಯಾಗೇ ಇತ್ತು ಎಂದು ಪ್ರೇಕ್ಷಕರು ಹೇಳುವ ವೇಳೆಗೆ ಈಗ ಅರುಣ್ ಸಾಗರ್ ಅವರು ಪ್ರೇಕ್ಷಕರನ್ನೇ ಗೊಂದಲಕ್ಕೆ ದೂಡಿದ್ದಾರೆ.

ಹೌದು, ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಅರುಣ್ ಸಾಗರ್ ಅವರು ಮನೆ ಮಂದಿಗೆ ಬಹಳ ಸಿಟ್ಟಿನಿಂದ ಕ್ಲಾಸ್ ತೆಗೆದುಕೊಂಡ ದೃಶ್ಯಗಳನ್ನು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದರು. ಸಾಗರದಂತೆ ಮೌನವಾಗಿದ್ದ ಅವರಲ್ಲಿ ಕೋಪದ ಸುನಾಮಿ ಯನ್ನು ಕಂಡು ಪ್ರೇಕ್ಷಕರು ಇದೇನಾಯ್ತು ಎಂದು ಶಾ ಕ್ ಆಗಿದ್ದರು. ಆದರೆ ವಿಷಯ ಅರ್ಥವಾದ ಮೇಲೆ ಪ್ರೇಕ್ಷಕರು ಅವರ ಸಿಟ್ಟಿಗೆ ಅರ್ಥವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವಾಗಲೇ ಈಗ ಅರುಣ್ ಸಾಗರ್ ಅವರ ಹೊಸ ಪ್ರೋಮೋ ಮತ್ತೊಮ್ಮೆ ಶಾ ಕ್ ನೀಡಿದೆ.

ಅರಣ್ ಸಾಗರ್ ಅವರು ಕಪ್ಪು ಬಣ್ಣದಿಂದ ಕಣ್ಣಿನ ಸುತ್ತಾ ಮೇಕಪ್ ಮಾಡಿಕೊಂಡು, ಹಣೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಬರೆದುಕೊಂಡಿದ್ದು, ಬಿಳಿಯ ವಸ್ತ್ರದ ಮೇಲೆ ಕ್ಷಮಿಸಿ ಎಂದು ಬರೆದುಕೊಂಡು ಅದನ್ನು ಬಾಯಿಗೆ ಕಟ್ಟಿಕೊಂಡು ಮನೆ ಮಂದಿಯ ಬಳಿ ಕ್ಷಮಾಪಣೆ ಕೇಳಲು ಮುಂದಾಗಿದ್ದಾರೆ. ಅವರ ಈ ವರ್ತನೆ ನೋಡಿ ಪ್ರಶಾಂತ್ ಸಂಬರ್ಗಿ ಬೇಸರಗೊಂಡು ಹೀಗೆ ಮಾಡಿದರೆ ಕ್ಷಮಾಪಣೆಗೆ ಬೆಲೆ ಇರಲ್ಲ ಎಂದಿದ್ದಾರೆ. ಕಾವ್ಯ ಶ್ರೀ ಗೌಡ ಅವರು ಸಹಾ ಅರುಣ್ ಸಾಗರ್ ಅವರ ಬಗ್ಗೆ ಅಸಮಾಧಾನದಿಂದ ಮಾತನಾಡಿರುವುದನ್ನು ಸಹಾ ನಾವು ನೋಡಬಹುದಾಗಿದೆ.

ವಿಚಿತ್ರವಾದ ಮೇಕಪ್ ಹಾಗೂ ಡ್ರೆಸ್ ಮಾಡಿಕೊಂಡ ಅರುಣ್ ಸಾಗರ್ ಅವರು ನನಗೆ ನಾನು ಅರ್ಥವಾಗಬೇಕಿದೆ ಎಂದು ಮಾರ್ಮಿಕವಾಗಿ ಮಾತನಾಡುತ್ತಾ, ಮನೆ ಮಂದಿ ಮುಂದೆ ಕುಣಿಯುತ್ತಾ, ತಮಾಷೆ ಮಾಡುತ್ತಾ ಕ್ಷಮಿಸಿ ಎಂದು ಕೇಳಿದ್ದಾರೆ. ಅವರ ಈ ವರ್ತನೆ ನೋಡಿ ಮತ್ತೆ ಮನೆ ಮಂದಿ ಶಾ ಕ್ ಆಗಿದ್ದಾರೆ. ಅರುಣ್ ಸಾಗರ್ ಅವರ ಈ ವರ್ತನೆ ಈಗ ಪ್ರೇಕ್ಷಕರಿಗೂ ಗೊಂದಲವನ್ನು ಉಂಟು ಮಾಡಿದೆ. ಅಲ್ಲದೇ ಪ್ರೋಮೋ ನೋಡಿದ ನೆಟ್ಟಿಗರು ಸಹಾ ವೈವಿದ್ಯಮಯವಾದ ಪ್ರತಿಕ್ರಿಯೆಗಳನ್ನು ನೀಡುತ್ತಾ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

Leave a Comment