ನಾಳೆ ಪುಷ್ಪ ಬಿಡುಗಡೆ: ಸಿನಿಮಾ ವಿ ರು ದ್ಧ ಸಿಡಿದೆದ್ದ ಕನ್ನಡ ಅಭಿಮಾನಿಗಳು ನೀಡಿದ್ದಾರೆ ಬಹಿಷ್ಕಾರಕ್ಕೆ ಕರೆ

Entertainment Featured-Articles News
84 Views

ಟಾಲಿವುಡ್ ನ ಸ್ಟಾರ್ ನಟ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿರುವ ರಶ್ಮಿಕಾ ಮದ್ದಣ್ಣ ನಾಯಕಿಯಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ’ ನಾಳೆ ಐದು ಭಾಷೆಗಳಲ್ಲಿ ಬಿಡುಗಡೆ ಭರ್ಜರಿಯಾಗಿ ಬಿಡುಗಡೆ ಆಗುತ್ತಿದೆ. ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಸಿನಿಮಾದ ಪ್ರಮೋಷನ್ ಬೆಂಗಳೂರಿನಲ್ಲಿ ನಿನ್ನೆ ತಾನೇ ನಡೆದಿದ್ದು ಈ ವೇಳೆ ನಡೆದಂತಹ ಕೆಲವು ಘಟನೆಗಳ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಆದರೆ ಇವೆಲ್ಲವುಗಳ ನಡುವೆಯೇ ಹೊಸ ವಿ ವಾ ದ ವೊಂದು ಹುಟ್ಟಿಕೊಂಡಿದೆ.

ಒಂದು ಕಡೆ ನಾಳೆ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವಾಗಲೇ, ಆನ್ ಲೈನ್ ನಲ್ಲಿ ಸಿನಿಮಾಗಳ ಟಿಕೆಟ್ ಗಾಗಿ ಬಹಳ ದೊಡ್ಡ ಸಂಖ್ಯೆಯಲ್ಲಿ ಮುಂಗಡ ಬುಕಿಂಗ್ ಕೂಡಾ ನಡೆದಿದೆ. ಆದರೆ ಸಿನಿಮಾ ಬಿಡುಗಡೆಯ ವೇಳೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ #boycottpushpainkarnataka ಎನ್ನುವ ಹ್ಯಾಷ್ ಟ್ಯಾನ್ ನ ಅಡಿಯಲ್ಲಿ ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಪುಷ್ಪ ಸಿನಿಮಾವನ್ನು ಬಹಿಷ್ಕರಿಸಬೇಕು ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ.

ಪುಷ್ಪ ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಿದ್ದರೂ ಕೂಡಾ ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಗಳಂತಹ ಪ್ರಮುಖ ನಗರಗಳಲ್ಲೇ ಪುಷ್ಪ ಸಿನಿಮಾ ತೆಲುಗು ವರ್ಶನ್ ನಲ್ಲೇ ಹೆಚ್ಚು ಬಿಡುಗಡೆ ಕಾಣುತ್ತಿದೆ. ಕನ್ನಡಕ್ಕೆ ಡಬ್ ಆಗಿದ್ದರೂ ಕೂಡಾ ತೆಲುಗಿನಲ್ಲಿ ಹೆಚ್ಚು ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಕನ್ನಡ ಅಭಿಮಾನಿಗಳು ಸಿನಿಮಾವನ್ನು ಬಹಿಷ್ಕರಿಸಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ.

ಪ್ರಮುಖ ನಗರಗಳಲ್ಲಿ ಕೇವಲ ಒಂದೆರಡು ಶೋ ಗಳಿಗೆ ಮಾತ್ರವೇ ಕನ್ನಡದಲ್ಲಿ ಡಬ್ಬಿಂಗ್ ಆಗಿರುವ ಸಿನಿಮಾ ಪ್ರದರ್ಶನಕ್ಕೆ ಅವಕಾಶವನ್ನು ನೀಡಲಾಗಿತದೆ. ಆದರೆ ಕನ್ನಡಕ್ಕಿಂತ ಹೆಚ್ಚು ತಮಿಳು ಹಾಗೂ ಮಲಯಾಳಂ ವರ್ಶನ್ ಗಳಿಗೆ ಅವಕಾಶವನ್ನು ನೀಡಲಾಗಿದೆ. ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಥಿಯೇಟರ್ ಗಳಲ್ಲಿ ಈಗಾಗಲೇ ಸೀಟುಗಳು ಭರ್ತಿಯಾಗಿದ್ದರೆ, ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಥಿಯೇಟರ್ ಗಳಲ್ಲಿ ಇನ್ನೂ ಸೀಟುಗಳು ಭರ್ತಿಯಾಗಿಲ್ಲ ಎನ್ನುವ ವಿಷಯ ಕೂಡಾ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

Leave a Reply

Your email address will not be published. Required fields are marked *