ತನ್ನ ಮಗಳಿಗೇ ಲಿಪ್ ಲಾಕ್ ಮಾಡಿ ಸಂಚಲನ ಸೃಷ್ಟಿಸಿದ್ದ ಮಹೇಶ್ ಭಟ್: ಅವರ ಆಸೆ ಕೇಳಿ ಶಾ ಕ್ ಆಗಿದ್ರು ಜನ!!

Written by Soma Shekar

Published on:

---Join Our Channel---

ಇಂದು ಬಾಲಿವುಡ್ ನ ಪ್ರಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ಅವರ ಹಿರಿಯ ಮಗಳು ನಟಿ ಪೂಜಾ ಭಟ್ ಅವರ 50 ನೇ ಜನ್ಮದಿನವಾಗಿದೆ. ನಟಿ ಪೂಜಾ ಭಟ್ ದಶಕಕ್ಕೂ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿಲ್ಲ. ಅಲ್ಲದೇ ನಟಿ ಪೂಜಾ ಭಟ್ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲವಾದರೂ, ನಟಿಸಿದ ಕೆಲವೇ ಸಿನಿಮಾಗಳಿಂದ ತಮ್ಮ ಅಭಿನಯದ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಪೂಜಾ ಭಟ್ ಅವರ ಅಭಿಮಾನಿಗಳ ಬಳಗವೂ ಸಹಾ ಇತ್ತು. ಇನ್ನು ನಟಿ ಇತ್ತೀಚಿಗಷ್ಟೇ ಬಾಂಬೆ ಬೇಗಮ್ಸ್ ಎನ್ನುವ ವೆಬ್ ಸರಣಿಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ.

ನಟಿ ಪೂಜಾ ಭಟ್ ತಮ್ಮ ತಂದೆ ಮಹೇಶ್ ಭಟ್ ಗೆ ಬಹಳ ಹತ್ತಿರವಾಗಿದ್ದರು. ಅಲ್ಲದೇ ಮಹೇಶ್ ಭಟ್ ಒಂದೊಮ್ಮೆ ತಾನು ತನ್ನ ಮಗಳನ್ನೇ ಮದುವೆಯಾಗಲು ಬಯಸುವುದಾಗಿ ಹೇಳಿದ್ದ ಮಾತು ದೊಡ್ಡ ಸುದ್ದಿಯಾಗಿತ್ತು, ಒಂದು ಸಂಚಲನವನ್ನು ಸೃಷ್ಟಿಸಿತ್ತು ಕೂಡಾ. ನಿರ್ದೇಶಕ ಹಾಗೂ ನಿರ್ಮಾಪಕ ಮಹೇಶ್ ಭಟ್ ತಮ್ಮ ಬಿಂದಾಸ್ ಮತ್ತು ಬೋಲ್ಡ್ ಲೈಫ್ ಸ್ಟೈಲ್ ನಿಂದಾಗಿಯೇ ಹೆಚ್ಚು ಸುದ್ದಿಯನ್ನು ಮಾಡಿದ್ದರು ಹಾಗೂ ಅದೇ ಅನೇಕ ಸಂದರ್ಭಗಳಲ್ಲಿ ಚರ್ಚೆಗೆ ಕಾರಣವಾಗಿದೆ ಎನ್ನುವುದು ಕೂಡಾ ವಾಸ್ತವದ ವಿಷಯವಾಗಿದೆ.

ಮಹೇಶ್ ಭಟ್ ಅವರ ವೈಯಕ್ತಿಕ ಜೀವನ ಹಲವು ಬಾರಿ ವಿ ವಾ ದಗಳನ್ನು ಹುಟ್ಟು ಹಾಕಿದೆ. ಇವರ ಮಗಳು ಪೂಜಾ ಭಟ್ ಸಿನಿಮಾಗಳಲ್ಲಿ ನಟನೆ ಮಾತ್ರವೇ ಅಲ್ಲದೇ ತಂದೆಗೆ ನಿರ್ದೇಶನ ಹಾಗೂ ನಿರ್ಮಾಣದ ವಿಚಾರದಲ್ಲಿ ನೆರವನ್ನು ನೀಡುತ್ತಿದ್ದರು. ಒಂದು ಸಮಯದಲ್ಲಿ ಹೇಗಾಗಿತ್ತು ಎಂದರೆ ಮಹೇಶ್ ಭಟ್ ತಮ್ಮ‌ ಮಗಳ ಜೊತೆ ಮಾಡಿದ ಒಂದು ಕೆಲಸವು ಜನರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿತ್ತು. ಇಂತಹ ಒಂದು ಅನಿರೀಕ್ಷಿತ ಹಾಗೂ ವಿಪರೀತವನ್ನು ನೋಡಿ ಜನರು ಶಾ ಕ್ ಆಗಿದ್ದು ಕೂಡಾ ಉಂಟು, ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು ಕೂಡಾ.

ಹೌದು, ಮಾದ್ಯಮಗಳ ವರದಿಯ ಪ್ರಕಾರ ಮಹೇಶ್ ಭಟ್ ಮಗಳ ಜೊತೆ ಒಂದು ಮ್ಯಾಗಜೀನ್ ಗಾಗಿ ಮಾಡಿದ ಫೋಟೋ ಶೂಟ್ ನಿಂದಾಗಿ ದೊಡ್ಡ ವಿ ವಾ ದದಲ್ಲಿ ಸಿಲುಕಿದ್ದರು. ಏಕೆಂದರೆ ಈ ಫೋಟೋ ಶೂಟ್ ನಲ್ಲಿ ಮಹೇಶ್ ಭಟ್ ಬಹಳ ಬೋಲ್ಡಾಗಿ ತಮ್ಮ ಮಗಳ ಜೊತೆ ಪೋಸ್ ಗಳನ್ನು ನೀಡಿದ್ದರು. ಆದರೆ ಎಲ್ಲದಕ್ಕಿಂತ ದೊಡ್ಡ ವಿ ವಾ ದಕ್ಕೆ ಕಾರಣವಾಗಿದ್ದು ಮಹೇಶ್ ಭಟ್ ತಮ್ಮ ಮಗಳ ಜೊತೆ ಲಿಪ್ ಟು ಲಿಪ್ ಕಿಸ್ ಮಾಡಿದ್ದು. ಆ ಫೋಟೋ ಮ್ಯಾಗಜೀನ್ ನಲ್ಲಿ ಪ್ರಕಟಗೊಂಡ ಕೂಡಲೇ ಇಡೀ ದೇಶದಲ್ಲಿ ಒಂದು ಸಂಚಲನ ಹುಟ್ಟು ಹಾಕಿತ್ತು.

ಆದರೆ ಅಷ್ಟಕ್ಕೇ ಸುಮ್ಮನಾಗದ ಮಹೇಶ್ ಭಟ್ ತನ್ನ ಮಗಳ ಅಂದಕ್ಕೆ ಸೋತಿರುವ ತಾನು, ಮಗಳನ್ನು ಮದುವೆಯಾಗಲು ಬಯಸಿರುವುದಾಗಿ ಹೇಳಿದ್ದರು. ಫೋಟೋ ಹಾಗೂ ಮಹೇಶ್ ಭಟ್ ಹೇಳಿಕೆಗಳ ನಂತರ ಅವರಿಗೆ ಜನರಿಂದ ಬೈಗುಳಗಳು ಹರಿದು ಬಂದವು ಅಲ್ಲದೇ ಕೆಲವರು ಅವರನ್ನು ಹೊ ಡೆ ಯುವ, ಕೊ ಲ್ಲು ವ ಬೆ ದರಿಕೆಯನ್ನು ಸಹಾ ಹಾಕಿದ್ದು ಉಂಟು. ಈ ಬೆಳೆವಣಿಗೆಗಳ ನಂತರ ಮಹೇಶ್ ಭಟ್ ಖಿನ್ನತೆಗೆ ಒಳಗಾಗಿ, ಸ್ವಲ್ಪ ಕಾಲ ಮನೆಯಿಂದ ಹೊರ ಬಂದಿರಲಿಲ್ಲ.

Leave a Comment